ಭೇಟಿಗೆ ಬಂದ ಸಾಧುಕೋಕಿಲಗೆ ನೋ ಎಂದಿದ್ದೇಕೆ ದರ್ಶನ್

Sampriya

ಮಂಗಳವಾರ, 23 ಜುಲೈ 2024 (14:53 IST)
Photo Courtesy X
ಬೆಂಗಳೂರು:ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ಕನ್ನಡ ಇಂಡಸ್ಟ್ರಿಯ ಪ್ರಮುಖರು ಪರಪ್ಪನ ಅಗ್ರಹಾರದತ್ತ ಬರುತ್ತಿದ್ದಾರೆ.

ನಿನ್ನೆ ವಿನೋದ್ ರಾಜ್ ಅವರು ದಿನಕರ್ ತೂಗುದೀಪ್, ವಿಜಯಲಕ್ಷ್ಮೀ ಜತೆ ಹೋಗಿ ದರ್ಶನ್ ಅವರ ಜತೆ ಕೆಲಹೊತ್ತು ಮಾತುಕತೆ ನಡೆಸಿದರು. ಇಂದು ಸಂಗೀತ ನಿರ್ದೇಶಕ, ನಟ ಸಾಧುಕೋಕಿಲ ಅವರು ದರ್ಶನ್‌ರನ್ನು ಭೇಟಿಯಾಗಲೆಂದು ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ಆದರೆ ಭೇಟಿಗೆ ಅವಕಾಶ ಸಿಗದ ಕಾರಣ ಸಾಧುಕೋಕಿಲ ವಾಪಾಸ್ಸಾಗಿದ್ದಾರೆ.

ಇನ್ನೂ ದರ್ಶನ್ ಅವರನ್ನು ವಾರದಲ್ಲಿ ಎರಡು ಬಾರಿ ಭೇಟಿಗೆ ಅವಕಾಶವಿದೆ. ಒಂದು ಬಾರಿ ಭೇಟಿಗೆ ಐದು ಮಂದಿಗೆ ಅವಕಾಶ ಇರುವ ನಿಯಮವಿದೆ. ಸೋಮವಾರ ದರ್ಶನ್ ಅವರ ಕುಟುಂಬ ಭೇಟಿಗೆ ಬಂದಿತ್ತು.ಇದೀಗ ಸಾಧುಕೋಕಿಲ ಅವರಿಗೆ ಅವಕಾಶ ಮಾಡಿಕೊಟ್ಟರೆ ಈ ವಾರ ಮತ್ತೇ ಫ್ಯಾಮಿಲಿಗೆ ಭೇಟಿಯಾಗಲು ಅವಕಾಶವಿರುವುದಿಲ್ಲ. ಆದ್ದರಿಂದ ಜೈಲು ಅಧಿಕಾರಿ ಸಾಧುಕೋಕಿಲ ಅವರಿಗೆ ಮುಂದಿನ ಬಾರಿ ದರ್ಶನ್ ಕುಟುಂಬದ ಜತೆ ಬಂದು ಅವರನ್ನು ಭೇಟಿಯಾಗಿ ಎಂದು ಹೇಳಿದ್ದಾರೆ.

ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ಸಾಧುಕೋಕಿಲ ಅವರು, ʻʻನಾನು ಇಂದು ಭೇಟಿ ಮಾಡಿದರೆ ಈ ವಾರ ದರ್ಶನ್ ಅವರ ಕುಟುಂಬದವರಿಗೆ ಅವಕಾಶ ಸಿಗುವುದಿಲ್ಲ. ಹೀಗಾಗಿ ನಾನು ಗುರುವಾರ ಕುಟುಂಬದವರ ಜೊತೆ ಭೇಟಿ ಮಾಡುತ್ತೇನೆ. ಮೀಡಿಯಾದವರು ವಿಡಿಯೋ ‌ಮಾಡಿದ್ದರಿಂದ ನನ್ನನ್ನು ಹೊರಗೆ ಕಳುಹಿಸಿಬಿಟ್ರು ಎಂದು ತಮಾಷೆ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ