ದರ್ಶನ್‌ರನ್ನು ನಂಬಿಕೊಂಡ ದೊಡ್ಡ ಕುಟುಂಬ ನೋವಿನಲ್ಲಿದೆ: ತರುಣ್ ಸುಧೀರ್

Sampriya

ಗುರುವಾರ, 11 ಜುಲೈ 2024 (19:19 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಅವರು ಬಗ್ಗೆ ಪ್ರತಿಕ್ರಿಯಿಸಿದ ನಟ, ನಿರ್ದೇಶಕ ತರುಣ್ ಸುಧೀರ್ ಅವರು ಈ ಘಟನೆಯಿಂದ ತುಂಬಾ ನೋವಿನಲ್ಲಿ ಇದ್ದೇನೆ ಎಂದರು.

ಅವರು ಮಹಾನಟಿ ಶೋ ಫಿನಾಲೆ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ನಟ ದರ್ಶನ್‌ ಅವರು ಜೈಲಿನಿಂದ ಆರೋಪ ಮುಕ್ತರಾಗಿ ಆದಷ್ಟು ಬೇಗ ಹೊರ ಬರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಇನ್ನೂ ಈ ಪ್ರಕರಣದ ಬಗ್ಗೆ ಏನೂ ಮಾತನಾಡಬೇಕೆಂದು ಗೊತ್ತಾಗ್ತಿಲ್ಲ ಎಂದರು.

ರೇಣುಕಾಸ್ವಾಮಿ ಅವರ ಕುಟುಂಬದ ಪರಿಸ್ಥಿತಿ ನೋಡಿದಾಲೂ ನನಗೆ ನೋವಾಗುತ್ತದೆ. ಆ ಥರ ಘಟನೆ ಆಗಬಾರದಿತ್ತು. ಆದರೆ ಇಲ್ಲೂ ಕೂಡ ನನ್ನ ಕುಟುಂಬನೇ ಇದೆ. ನನ್ನ ಸ್ವಂತ ಅಣ್ಣ ಈ ರೀತಿಯ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದರೆ ಎಷ್ಟು ನೋವಾಗುತ್ತದೆ ಅಷ್ಟೇ ನೋವು ನನಗಾಗುತ್ತಿದೆ. ಇದರಿಂದ ದರ್ಶನ್ ಅವರನ್ನು ನಂಬಿಕೊಂಡ ದೊಡ್ಡ ಕುಟುಂಬ ಕೂಡ ನೋವಿನಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ