ಸತೀಶ್ ನೀನಾಸಂ ಚಿತ್ರಕ್ಕೆ ಕಾಲಿವುಡ್ ಸಂಗೀತ ನಿರ್ದೇಶಕನ ಬ್ಯಾಗ್ರೌಂಡ್ ಸ್ಕೋರ್..!!

ಶುಕ್ರವಾರ, 13 ಮಾರ್ಚ್ 2020 (13:08 IST)
ಟೀಸರ್ ಮೂಲಕ ಸ್ಯಾಂಡಲ್ವುಡ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ಮಾಡುತ್ತಿರುವ ಚಿತ್ರ ‘ಗೋದ್ರಾ’..ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಅಭಿನಯದ ಈಚಿತ್ರದ ಎಫೆಕ್ಟಿವ್ ಟೀಸರ್ ಸಖರ್ ಬಝ್ ಹುಟ್ಟುಹಾಕಿತ್ತು. ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಕಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಕೆ.ಪಿ ಅವ್ರನ್ನು ಕರೆ ತಂದಿದ್ದಾರೆ.
ಕಾಲಿವುಡ್ ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ಕೆ.ಪಿ ‘ಗೋದ್ರಾ’ ಮೂಲಕ ಸ್ಯಾಂಡಲ್ವುಡ್ ಅಂಗಳಕ್ಕೆ ಪರಿಚಿತರಾಗುತ್ತಿದ್ದು, ‘ಗೋದ್ರಾ’ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಭೋದಾಯಿ ಎರಿ, ಭೋದಿ ಮಾರಿ ಚಿತ್ರದ ಮೂಲಕ ಖ್ಯಾತಿ ಗಳಿಸಿರುವ ಕೆ.ಪಿ
ಗೋದ್ರಾ  ಚಿತ್ರಕ್ಕೆ ಬ್ಯಾಗ್ರೌಂಡ್ ಸ್ಕೋರ್ ನೀಡಲು ಒಪ್ಪಿಕೊಂಡಿದ್ದು ಚಿತ್ರದ ಮೇಲಿನನೀರೀಕ್ಷೆಯನ್ನು ಹೆಚ್ಚು ಮಾಡಿದೆ.
‘ಗೋದ್ರಾ’ ಪೊಲಿಟಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ನೈಜ ಘಟನೆಯಾಧಾರಿತ ಈ ಚಿತ್ರರಿಯಲಿಟಿಗೆ ಹತ್ತಿರವಾಗಿದೆ. ಸಮಾಜದಲ್ಲಿ ನಡೆಯುವ ಶೋಷಣೆಯ ವಿರುದ್ಧ ಬಂಡೆದ್ದು ಹೋರಾಟಗಾರನಾಗುವ ವ್ಯಕ್ತಿಯ ಕಥೆಯನ್ನು ‘ಗೋದ್ರಾ’ ಚಿತ್ರ ಹೇಳ ಹೊರಟಿದೆ. ಸತೀಶ್ನೀನಾಸಂ, ಶ್ರದ್ಧಾ ಶ್ರೀನಾಥ್ ಚಿತ್ರದಲ್ಲಿ ಪತ್ರಿಕೋಧ್ಯಮ ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದು,. ಚಿತ್ರದಲ್ಲಿ ಅಚ್ಯುತ್ ಕುಮಾರ್ ರಾಜಕಾರಣಿಯಾಗಿ, ವಸಿಷ್ಠ ಸಿಂಹಪೈಲೆಟ್ ಆಗಿ ಮಿಂಚಿದ್ದಾರೆ.
ಕೆ,ಎಸ್. ನಂದೀಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜ್ಯೂಡಾ ಸ್ಯಾಂಡಿ, ನವೀನ್ ಸಜ್ಜು, ಟೋನಿ ಜೋಸೆಫ್ ಮೂವರು ಸಂಗೀತ ನಿರ್ದೇಶಕರುಚಿತ್ರದ ಬೇರೆ ಬೇರೆ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ಹಿನ್ನೆಲೆ ಸಂಗೀತವನ್ನು ಕೆ.ಪಿ ನೀಡುತ್ತಿದ್ದಾರೆ. ಈಗಾಗಲೇ ಫೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ತೊಡಗಿರುವ ಚಿತ್ರತಂಡ ಸದ್ಯದಲ್ಲೇ ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಮೂಲಕ ಲಗ್ಗೆ ಇಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ