ಅಪ್ಪು ಸಾವಿನ ನೋವು ಮರೆಯಲು ಶಿವಣ್ಣ ಬ್ಯಾಕ್ ಟು ವರ್ಕ್

ಮಂಗಳವಾರ, 7 ಡಿಸೆಂಬರ್ 2021 (09:25 IST)
ಬೆಂಗಳೂರು: ಪ್ರೀತಿಯ ಅಪ್ಪು ಕಳೆದುಕೊಂಡ ನೋವು ಮನದಲ್ಲಿ ಹೆಪ್ಪುಗಟ್ಟಿದೆ. ಈ ನೋವಿನಿಂದ ಹೊರಬರಲು ಶಿವರಾಜ್ ಕುಮಾರ್ ಈಗ ಕೆಲಸದ ಮೊರೆ ಹೋಗಿದ್ದಾರೆ.

ಶಿವರಾಜ್ ಕುಮಾರ್ ನಾಯಕರಾಗಿ ಕೆಲವು ಸಿನಿಮಾಗಳು ಅನೌನ್ಸ್ ಆಗಿತ್ತು. ಆದರೆ ಪುನೀತ್ ಅಕಾಲಿಕ ನಿಧನದಿಂದಾಗಿ ಶಿವಣ್ಣ ಸಿನಿಮಾ ಕೆಲಸಗಳಿಂದ ಕೆಲವು ದಿನ ದೂರವೇ ಇದ್ದರು.

ಇದೀಗ ಮತ್ತೆ ಕೆಲಸಕ್ಕೆ ಮರಳಲು ತೀರ್ಮಾನಿಸಿದ್ದಾರೆ. ‘ವೇದ’ ಎಂಬ ಟೈಟಲ್ ನಲ್ಲಿ ಶಿವಣ್ಣ 125 ನೇ ಸಿನಿಮಾ ಈಗಾಗಲೇ ಘೋಷಣೆಯಾಗಿತ್ತು. ಎ. ಹರ್ಷ ನಿರ್ದೇಶನದ ಸಿನಿಮಾದ ಶೂಟಿಂಗ್ ಕಳೆದ ತಿಂಗಳೇ ಆರಂಭವಾಗಬೇಕಿತ್ತು. ಆದರೆ ಅಪ್ಪು ನಿಧನದಿಂದಾಗಿ ಅರ್ಧಕ್ಕೇ ನಿಂತಿತ್ತು. ಇದೀಗ ಸಿನಿಮಾ ಕೆಲಸಗಳು ಆರಂಭವಾಗಲಿದ್ದು, ಶೂಟಿಂಗ್ ಗೆ ಶಿವಣ್ಣ ಮತ್ತೆ ಹಾಜರಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ