ತಮ್ಮ ಗೆಳೆಯ ದರ್ಶನ್ ಜೊತೆಗೆ ಕಳೆದ ಸುಮಧುರ ದಿನಗಳನ್ನು ಮೆಲುಕು ಹಾಕಿದ ನಟ ಸುದೀಪ್

ಶನಿವಾರ, 19 ಮೇ 2018 (06:31 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಂದುಕಾಲದಲ್ಲಿ ಉತ್ತಮ ಸ್ನೇಹಿತರಾಗಿದ್ದರು. ಆಮೇಲೆ ಅವರಿಬ್ಬರ ನಡುವೆ ವೈಮನಸ್ಸು ಉಂಟಾಗಿ ಬೇರೆ ಬೇರೆಯಾಗಿದ್ದರು. ಆದರೆ ಇದೀಗ ಕಿಚ್ಚ ಸುದೀಪ್ ಅವರು ತಮ್ಮ ಗೆಳೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ  ಜೊತೆಗೆ ಕಳೆದ ದಿನಗಳ ಬಗ್ಗೆ ನೆನಪಿಸಿಕೊಂಡಿದ್ದಾರೆ.


ಖಾಸಗಿ ಪತ್ರಿಕೆವೊಂದಕ್ಕೆ  ಸಂದರ್ಶನ ನೀಡುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಸುದೀಪ್ ಅವರು,’ಒಂದು ಕಾಲದಲ್ಲಿ ನಾನು ದರ್ಶನ್ ಎಲ್ಲಾ ಕಡೆ ಬೈಕ್‍ನಲ್ಲಿ ಸುತ್ತಾಡುತ್ತಿದ್ದೆವು. ಆಗ ನಮ್ಮನ್ನು ನೋಡಿದ ಎಲ್ಲರೂ ಇವರು ಹೀರೋಗಳ ಎಂದುಕೊಳ್ಳುತ್ತಿದ್ದರು. ಅದೊಂದು ಒಳ್ಳೆಯ ಫೀಲಿಂಗ್ ಚೆನ್ನಾಗಿತ್ತು. ಆ ದಿನಗಳು ಅವನ ಜತೆಗಿನ ಸ್ನೇಹ ಮಧುರ. ದರ್ಶನ್‍ಗೆ ತನ್ನ ಮೇಲೆ ಪೊಸೆಸೀವ್, ದರ್ಶನ್ ಯಾವತ್ತಿದ್ದರೂ ನನ್ನ ಗೆಳೆಯನೇ ಅವನ ತಲೆಗೆ ಯಾರೋ ಏನೋ ತುಂಬಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಾನು ಅವನನ್ನು ನೋಡಿದ್ದೇನೆ. ಆಗಿನಿಂದಲೂ ನನ್ನ ಕಂಡರೆ ಅವನಿಗೆ ತುಂಬಾ ಪ್ರೀತಿ’ ಎಂದು ಹೇಳಿದ್ದಾರೆ.


‘ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ದರ್ಶನ್‍ಗೆ ಬೇಸರ ಆಗಿರಬಹುದು. ಆದರೆ ಅದೆಲ್ಲಾ ಅದಾಗಿ ಅದೇ ಆಗಿದ್ದು. ಆ ರೀತಿ ನೋಡಿದ್ದರೆ ಯಾರ ಮೇಲಾದರೂ ದ್ವೇಷ ಸಾಧಿಸುವುದು ಏಕೆ? ಇಲ್ಲಿ ಎಲ್ಲರೂ ಸಾಧಕರೇ. ಇಂದು ಶಿವಣ್ಣ ಹಾಗೂ ನಾನು ಚೆನ್ನಾಗಿ ಇದ್ದೀವಿ ಎಂದರೆ ಅದು ನನಗೆ ಅವರ ಮೇಲೆ ಮೊದಲಿನಿಂದಲೂ ಪ್ರೀತಿಯಿತ್ತು. ಮಧ್ಯದಲ್ಲಿ ಸ್ವಲ್ಪ ಹಾಳಾಗಿತ್ತು. ಅದು ಕೂಡ ಸತ್ಯ ಹಾಗೂ ಅದಕ್ಕೂ ಕಾರಣವಿತ್ತು’ ಎಂದು ಸುದೀಪ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ