ಮಂಡ್ಯದಲ್ಲಿ ಹೊಸ ಮನೆ ಕಟ್ಟಿಸಲು ಮುಂದಾದ ಸುಮಲತಾ ಅಂಬರೀಶ್

ಬುಧವಾರ, 1 ಸೆಪ್ಟಂಬರ್ 2021 (08:46 IST)
ಮಂಡ್ಯ: ಸಂಸದೆ ಸುಮಲತಾ ಅಂಬರೀಶ್, ಸ್ವಕ್ಷೇತ್ರದಲ್ಲಿ ಜನರಿಗೆ ಇನ್ನಷ್ಟು ಹತ್ತಿರವಾಗಲು ಇಲ್ಲೇ ಮನೆ ಕಟ್ಟಿಸಲು ಮುಂದಾಗಿದ್ದಾರೆ.


ಇದುವರೆಗೆ ಸುಮಲತಾ ಕ್ಷೇತ್ರದ ಜನರ ಕೈಗೆ ಸಿಗಲ್ಲ. ಬೆಂಗಳೂರಿನಲ್ಲೇ ಇರುತ್ತಾರೆ ಎಂಬ ಟೀಕೆಗಳು ಕೇಳಿಬರುತ್ತಿತ್ತು. ಇದೀಗ ಸುಮಲತಾ ಮಂಡ್ಯದಲ್ಲಿಯೇ ಮನೆ ಕಟ್ಟಲು ಮುಂದಾಗಿದ್ದಾರೆ.

ಮಂಡ್ಯ ಪ್ರವಾಸದಲ್ಲಿರುವ ಸುಮಲತಾ ಇಂದು ಹನಕೆರೆ ಗ್ರಾಮದ ಬಳಿ ಬೆಳಿಗ್ಗೆ 10 ಗಂಟೆಗೆ ಹೊಸ ಮನೆ ಕಟ್ಟಿಸುವ ಸಲುವಾಗಿ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಈ ಮೂಲಕ ಕ್ಷೇತ್ರದ ಜನರಿಗೆ ಇಲ್ಲಿಯೇ ಮನೆ ಕಟ್ಟಿಸಿ ನಿಮ್ಮೊಡನೆ ಇರುತ್ತೇನೆ ಎಂಬ ಮಾತು ಉಳಿಸಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ