ನನ್ನ ಮಕ್ಕಳು ಭಯೋತ್ಪಾದಕರಾಗುತ್ತಾರೆ ಎಂದವರಿಗೆ ಪ್ರಿಯಾಮಣಿ ಕೊಟ್ಟ ತಿರುಗೇಟು ಹೀಗಿದೆ

Sampriya

ಭಾನುವಾರ, 6 ಅಕ್ಟೋಬರ್ 2024 (18:40 IST)
Photo Courtesy X
ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ಅವರು ಆಗಾಗ ತಮ್ಮ ವೈಯಕ್ತಿಕ ವಿಚಾರ ಸಂಬಂಧ ಟ್ರೋಲ್‌ನಲ್ಲಿರುತ್ತಾರೆ. ಮುಸ್ಲಿಂ ಧರ್ಮದ ಯುವಕನನ್ನು ಮದುವೆಯಾಗಿದ್ದಕ್ಕೆ ನನ್ನನ್ನು ಯಾಕೆ ಆಗಾಗ ಪ್ರಶ್ನೆ ಮಾಡುತ್ತಾರೆಂದು ನಟಿ ಪ್ರಿಯಾಮಣಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಸ್ತಫ ರಾಜ್‌ ಅವರೊಂದಿಗೆ ಪ್ರಿಯಾಮಣಿ ನಿಶ್ಚಿತಾರ್ಥ ಘೋಷಣೆಯಾಗುತ್ತಿದ್ದ ಹಾಗೇ ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳು ಉಗ್ರರು ಆಗುತ್ತಾರೆಂದು ಹೇಳಿದ್ದರು.  ಇದೀಗ ಟೀಕೆ ಮಾಡಿದವರಿಗೆ ಪ್ರಿಯಾಮಣಿ ಖಡಕ್ ಉತ್ತರ ನೀಡಿದ್ದಾರೆ.

ಈಚೆಗೆ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾಮಣಿ, ಅನ್ಯ ಧರ್ಮದ ಯುವಕನನ್ನು ಮದುವೆಯಾಗಿದ್ದ ವಿಚಾರವಾಗಿ ನನ್ನನ್ನೂ ಇಂದಿಗೂ ಕೂಡಾ ಟ್ರೋಲ್ ಮಾಡುತ್ತಿದ್ದಾರೆ. ಇದು ತುಂಬಾನೇ ನೋವಾಗುತ್ತದೆ.  ನಮ್ಮನೇ ಯಾಕೆ ಟಾರ್ಗೇಟ್ ಮಾಡುತ್ತಿದ್ದಾರೆಂದು ಗೊತ್ತಿಲ್ಲ. ನಾನು ಈಚೆಗೆ  ಈದ್ ಮಿಲಾದ್ ಹಬ್ಬದ ಸಂಭ್ರಮದಲ್ಲಿ ಹಂಚಿಕೊಂಡ ಫೋಟೋಗೆ ಭಾರೀ ನೆಗೆಟಿವ್ ಕಮೆಂಟ್‌ಗಳು ಬಂದಿದೆ. ನಾನು ಮುಸ್ಲಿಂ ಧರ್ಮಕ್ಕೆ ಮತಂತಾರವಾಗಿದ್ದೇನೆಂದು ಕಮೆಂಟ್ ಮಾಡಿದ್ದಾರೆ.

ಮುಸ್ಲಿಂ ಧರ್ಮಕ್ಕೆ ಮತಂತಾರವಾಗುವುದಿಲ್ಲ ಎಂದು ನಾನು ಮದುವೆಗೂ ಮುನ್ನಾ ಮುಸ್ತಫ ಅವರಲ್ಲಿ ಹೇಳಿದ್ದೆ. ನಾನು ಹುಟ್ಟು ಹಿಂದೂ. ನಾವಿಬ್ಬರು ಎರಡು ಧರ್ಮಗಳಿಗೂ ಮರ್ಯಾದೆ ಕೊಡುತ್ತೇವೆ.

ಪ್ರಿಯಾಮಣಿ ಅವರು ಉದ್ಯಮಿ ಮುಸ್ತಫ ರಾಜ್ ಎಂಬರನ್ನು ಪ್ರೀತಿಸಿ 2017ರಲ್ಲಿ ರಿಜಿಸ್ಟರ್ ಮದುವೆಯಾದರು. ಅಂದಿನಿಂದಲೂ ಈ ಜೋಡಿ ತಮ್ಮ ಧರ್ಮದ ವಿಚಾರವಾಗಿ ನೆಟ್ಟಿಗರಿಂದ ಟ್ರೋಲ್ ಆಗುತ್ತಲೇ ಇದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ