ನಮ್ಮ ಪಿಕ್ಚರಲ್ಲಿ ಹೀರೋ ಯಾರು ವಿಲನ್ ಯಾರು ಗೊತ್ತಾಗಲ್ಲ ಮಾರ್ರೆ: ಯುಟಿ ಖಾದರ್

Sampriya

ಮಂಗಳವಾರ, 20 ಆಗಸ್ಟ್ 2024 (20:05 IST)
Photo Courtesy X
ಮಂಗಳೂರು: ನಮ್ಮ ರಾಜಕೀಯ ಬದುಕು ಕೂಡಾ ಸಿನಿಮಾ ಇದ್ದ ಹಾಗೇ. ವ್ಯತ್ಯಾಸ ಏನೆಂದರೆ ಸಿನಿಮಾದಲ್ಲಿ ಹೀರೋ, ವಿಲನ್ ಯಾರೆಂದು ಗೊತ್ತಾಗುತ್ತದೆ, ಆದರೆ ರಾಜಕೀಯದಲ್ಲಿ ಅದು ಗೊತ್ತಾಗುವುದಿಲ್ಲ ಎಂದು ಸ್ಪೀಕರ್ ಯುಟಿ ಖಾದರ್ ನಗೆ ಚಟಾಕಿ ಹಾರಿಸಿದ್ದಾರೆ.

ಅವರು ಬಿಗ್‌ಬಾಸ್‌ ಸ್ಪರ್ಧಿ ರೂಪೇಶ್ ಶೆಟ್ಟಿ ಅವರ ಮುಂಬರುವ ತುಳು ಸಿನಿಮಾದ ಟೈಟಲ್, ಟೀಸರ್ ಲಾಂಚ್ ಸಮಾರಂಭದಲ್ಲಿ ಮಾತನಾಡಿದರು.  ಸೋಮವಾರ ಮಂಗಳೂರಿನ ಸಿಟಿ ಸೆಂಟರ್‌ನಲ್ಲಿ ನಡೆದ 'ಜೈ' ಟೈಟಲ್ ಬಿಡುಗಡೆ ಕಾರ್ಯಕ್ರಮದಲ್ಲಿ ತುಳು ಚಿತ್ರರಂಗದ ದಿಗ್ಗಜರು ಸೇರಿದಂತೆ ರಾಜಕೀಯ ಮುಖಂಡರು ಭಾಗವಹಿಸಿದ್ದರು.

ಈ ವೇಳೆ ಸಿನಿಮಾ ಉದ್ದೇಶಿಸಿ ಮಾತನಾಡಿದ ಯುಟಿ ಖಾದರ್ ಅವರು, ನಮ್ಮ ರಾಜಕಾರಣಿಗಳ ಬದುಕು ಕೂಡಾ ಒಂದು ಸಿನಿಮಾ ಹಾಗೇ. ಸಿನಿಮಾದಲ್ಲಿರುವ ನಿರ್ಮಾಣ, ನಿರ್ದೇಶನ ನಮ್ಮದರಲ್ಲೂ ಇದೆ.  ಆದರೆ ಸಿನಿಮಾದಲ್ಲಿ ಹೀರೋ ಯಾರು, ವಿಲನ್ ಯಾರು ಅಂತಾ ಗೊತ್ತಾಗುತ್ತದೆ. ಆದರೆ ರಾಜಕಾರಣದಲ್ಲಿ ಯಾರು ವಿಲನ್, ಯಾರು ಹೀರೋ ಅಂತಾ ಗೊತ್ತಾಗುವುದಿಲ್ಲ ಎಂದು ಕಾಮಿಡಿ ಮಾಡಿದ್ದಾರೆ.

ಈ ವೇಳೆ ಅವರ ಪಕ್ಕದಲ್ಲೇ ಇದ್ದ ಶಾಸಕ ವೇದವ್ಯಾಸ್ ಕಾಮತ್, ಸಂಸದ ಬ್ರಿಜೇಶ್ ಚೌಟ ಅವರು ನಗು ಬೀರಿದ್ದಾರೆ. ಅದಲ್ಲದೆ ವೇದಿಕೆ ಮುಂಭಾಗದಲ್ಲಿದ್ದವರು ಚಪ್ಪಾಳೆ ಹಾಕಿ, ನಕ್ಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ