ದೇವರೇ ಇದು...ಮದಿರೆಯ ಮಾಯೆ

ಶೇಂದಿಯ ಅಂಗಡಿಗೆ ಮಾಧವರಾವ್ ಪ್ರವೇಶವಾಯ್ತು!

''ಅಣ್ಣಾ ನಮಸ್ಕಾರ! ದೇವರು ನಮಸ್ಕಾರ!" ಎನ್ನುತ್ತಾ ಅಲ್ಲಿ ಸೇರಿದ್ದ ಎಲ್ಲ ಕುಡುಕರು ಭಾರಿ ಮರ್ಯಾದೆ ನೀಡಿದರು. ಮಾಧವರಾವ್‌ ಸಿಲ್ಕ್ ಜುಬ್ಬಾ ಧರಿಸಿ ಜೇಬಿನಲ್ಲಿ ನೋಟಿನ ಕಂತೆಗಳನ್ನು ಇಟ್ಟುಕೊಂಡು ಬರುವುದರಿಂದಲೇ ಆತನಿಗೆ ಅಂತಹ ಗೌರವ.

ಮಾಧವರಾವ್‌ಗೆ ಹಿರಿಯರು ಸಂಪಾದಿಸಿಟ್ಟ ಆಸ್ತಿ ಕೊಳೆಯುತ್ತಿದೆ. ಶ್ರೀಮಂತಿಕೆ ಕುಣಿಯುತ್ತಿದೆ. ''ಅವರಿಗೆ ಬೇಗ ಶೇಂದಿ ಕೊಡು!" ಎಂದು ಅಂಗಡಿಯವನು ತನ್ನ ನೌಕರನನ್ನು ಗದರಿದನು.

''ಧಣಿ ಇನ್ನೂ ಎರಡು ತಾಳೆ ಗಿಡಗಳ ಶೇಂದಿ ಬರಲಿಲ್ಲ ಕ್ಷಮಿಸಿ ಧಣಿ" ಎಂದ ಅಂಗಡಿಯವನು.

''ಏನು ಶೇಂದಿ ಇನ್ನು ಬರಲಿಲ್ಲವಾ! ಸರಿ ಗಿಡದ ಹತ್ತಿರವೇ ಹೋಗಿ ಕುಡಿಯೋಣ ಬನ್ನಿ" ಎಂದು ಎಂದು ಅಲ್ಲಿ ನೆರೆದಿದ್ದ ಕುಡುಕರನ್ನು ಸೇರಿಸಿಕೊಂಡು ಹೊರಟರು ಮಾಧವರಾವ್.

ಹೇ ಕೇಳ್ರೋ! ನಿಜವಾಗಿ ಶೇಂದಿಯ ಮಜಾ ಅನುಭವಿಸಬೇಕೆಂದರೇ ಅದರ ಮರದಿಂದ ಇಳಿಯುತ್ತಲೇ ತಾಜಾತಾಜಾವಾಗಿ ಕುಡಿಯಬೇಕು. ಶೇಂದಿಯಲ್ಲಿ ಏಳು ಗುಣಗಳಿವೆ. ಅವುಗಳೆಲ್ಲಾ ಎಂತಹ ಸುಪ್ತ ಗುಣಗಳು. ಅದಕ್ಕಾಗಿ ತಪ್ಪದೆ ದಿನನಿತ್ಯ ಶೇಂದಿ ಕುಡಿಯಬೇಕು ಆ ಗುಣಗಳು ಯಾವವು ಎಂದು ನಿಮಗೆ ಗೊತ್ತಾ ಎಂದು ಕೇಳಿದರು ಮಾಧವರಾವ್ ತನ್ನ ಸಂಗಡಿಗರನ್ನು ಕೇಳಿದರು.

ಶೇಂದಿಯಲ್ಲಿ ಮಹತ್ವದ ಗುಣಗಳಿರುವುದರಿಂದಲೇ ಶೇಂದಿಯನ್ನು ನಾನು ತುಂಬಾ ಇಷ್ಟಪಟ್ಟು, ಹಾಯಾಗಿ ಎರಡು ಶೇಂದಿ ಕೊಡಗಳನ್ನು ಕುಡಿಯುತ್ತೇನೆ, ಮತ್ತು ಎಲ್ಲರಿಗೂ ಕುಡಿಸುತ್ತೇನೆ ಎಂದು ಮಾಧವರಾವ್ ಹೇಳುತ್ತಾ ಮಜಾಮಾಡುತ್ತಿದ್ದರು.

ಎರಡು ವರ್ಷಗಳ ನಿರಂತರ ಕುಡಿತದಿಂದಾಗಿ ಮಾಧವರಾವ್ ಆರೋಗ್ಯ, ಆರ್ಥಿಕ ಸ್ಥಿತಿ ಹದಗೆಟ್ಟು ಹೋಯಿತು. ಶೇಂದಿ ಕುಡಿಯಲು ಹಣವಿಲ್ಲದ ಪರಿಸ್ಥಿತಿ ಎದುರಾಯಿತು. ಕುಡಿದರೆ ನಡೆಯಲಾಗುವುದಿಲ್ಲ, ಕುಡಿಯದಿದ್ದರೂ ನಡೆಯಲಾಗುವುದಿಲ್ಲ! ಮಾಧವರಾವ್ ಪರಿಸ್ಥಿತಿ ಅಲ್ಲಿಗೆ ತಲುಪಿತು.

ದಾರಿಯಲ್ಲಿ ಹೋಗುವವರನ್ನು ಕಾಡಿ ಬೇಡಿ ಪಡೆದ ಹಣದಿಂದ ಶೇಂದಿ ಕುಡಿವ ಪರಿಸ್ಥಿತಿಗೆ ತಲುಪಿದ ಮಾಧವರಾವ್ ಈಗ ಬರೀ ಮಾಧವನಾದ. ದಿನನಿತ್ಯ ಶೇಂದಿಯ ನಶೆಯಲ್ಲೇ ನಾಶವಾಗುತ್ತಾ ಹೋದ.

ಕುಡಿದು ಕುಡಿದು ಆರೋಗ್ಯ ಕೆಟ್ಟಿತು. ಹಾಸಿಗೆ ಹಿಡಿದ. ಕೊನೆಗಾಲದಲ್ಲಿ ಬಂದ ಮಿತ್ರರನ್ನು ನೋಡಿ ಕ್ಷೀಣವಾಗಿ ಮಾತನಾಡಿದ. ಮಿತ್ರರೇ! ಶೇಂದಿ ಕುಡಿಯಬೇಡಿ. ಅದಕ್ಕೆ ಮೂರು ಅವಗುಣಗಳಿವೆ. ಒಂದು ನಮ್ಮ ಗೌರವವನ್ನು ಕೆಡಿಸುತ್ತಿದೆ. ಎರಡು ನಮ್ಮನ್ನು ಆರ್ಥಿಕವಾಗಿ ನಾಶವಾಗಿಸಿ ಬೀದಿ ಭಿಕಾರಿಯನ್ನಾಗಿ ಮಾಡುತ್ತದೆ. ಕೊನೆಯದಾಗಿ ನಮ್ಮ ಆರೋಗ್ಯವನ್ನು ಹದಗೆಡಿಸಿ ಮೃತ್ಯುವನ್ನು ತರುತ್ತದೆ ಎಂದು ಹೇಳಿ ಮರಣಹೊಂದಿದನು.

ವೆಬ್ದುನಿಯಾವನ್ನು ಓದಿ