ಡಿಸಿಎಂ ಅಜಿತ್ ಪವಾರ್ ವಿರುದ್ಧ ಕಿಡಿಕಾರಿದ ಸಿಎಂ ಬಿಎಸ್ ವೈ

ಬುಧವಾರ, 18 ನವೆಂಬರ್ 2020 (12:46 IST)
ಬೆಂಗಳೂರು : ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಉದ್ಧಟತನದ ಮಾತನಾಡಿದ್ದು, ಅವರ ಈ ನಡೆಗೆ ಸಿಎಂ ಬಿಎಸ್ ಯಡಿಯೂರಪ್ಪ ಖಂಡನೆ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮತ್ತೆ ಗಡಿ ಕ್ಯಾತೆ ತೆಗೆದಿದ್ದು, ಬೆಳಗಾವಿ, ಕಾರವಾರ ನಮ್ಮದೇ ಎಂದು ಹೇಳಿಕೆ ನಿಡಿದ್ದಾರೆ. ಈ ಮಾತು ಕನ್ನಡಿಗರನ್ನು ರೊಚ್ಚಿಗೆಳಿಸಿದೆ. ಡಿಸಿಎಂ ಅಜಿತ್ ಪವಾರ್ ಈ ಹೇಳಿಕೆಗೆ ಸಿಎಂ ಬಿಎಸ್ ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಹಾಜನ್ ಆಯೋಗದ ವರದಿಯೇ ಅಂತಿಮ. ವರದಿ ಅಂತಿಮ ಎಂದು ಇಡೀ ಜಗತ್ತಿಗೆ ಗೊತ್ತು. ಆದ್ರೂ ಗಡಿ ಬಗ್ಗೆ ಅಜಿತ್ ಪವಾರ್ ಕ್ಯಾತೆ ತೆಗೆದಿದ್ದಾರೆ. ಅಜಿರ್ ಪವಾರ್ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ