ಶಾರದಾಗೆ ಟಿಕೆಟ್​ ನೀಡುವಂತೆ ಬೆಂಬಲಿಗರ ಪಟ್ಟು

ಸೋಮವಾರ, 10 ಏಪ್ರಿಲ್ 2023 (19:00 IST)
ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಕಗ್ಗಂಟಾಗಿದೆ. ಟಿಕೆಟ್​ ಘೋಷಣೆಗೂ ಮುನ್ನವೇ ಬಂಡಾಯದ ಮುನ್ಸೂಚನೆ ಕೇಳಿಬರುತ್ತಿದೆ. ಟಿಕೆಟ್​​ ಆಕಾಂಕ್ಷಿ ನಿವೇದಿತಾ ಆಳ್ವಾ ಕಾಂಗ್ರೆಸ್​ ಟಿಕೆಟ್​ಗಾಗಿ ಲಾಭಿ ನಡೆಸುತ್ತಿದ್ದು, ನಿವೇದಿತಾ ಆಳ್ವಾಗೆ ಟಿಕೆಟ್ ಒಲಿದು ಬರುವ ಸಾಧ್ಯತೆಯಿದೆ.. ಇನ್ನೊಂದೆಡೆ ಮಾಜಿ ಶಾಸಕಿ ಶಾರದಾ ಶೆಟ್ಟಿಗೆ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದ್ದು, ಅವರು ಇಂದು ತಮ್ಮ ಅಭಿಮಾನಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಅಭಿಮಾನಿಗಳು, ಬೆಂಬಲಿಗರು ಶಾರದಾ ಶೆಟ್ಟಿಗೆ ಟಿಕೆಟ್ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಶಾಸಕರಾಗಿದ್ದಾಗ ಶಾರದಾ ಶೆಟ್ಟಿ ಕ್ಷೇತ್ರದಲ್ಲಿ ಸಾಕಷ್ಟು ‌ಅಭಿವೃದ್ದಿ ಮಾಡಿದ್ದಾರೆ.. ಆದ್ರಿಂದ ಈ ಬಾರಿ ಶಾರದಾ ಶೆಟ್ಟಿಗೆ ಟಿಕೆಟ್​ ನೀಡುವಂತೆ ಬೆಂಬಲಿಗರು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ