17 ಟನ್ ಪಡಿತರ ಅಕ್ಕಿ, ಲಾರಿ ವಶ

ಮಂಗಳವಾರ, 13 ನವೆಂಬರ್ 2018 (19:28 IST)
ಡಿಸಿಬಿ ಪೊಲೀಸರ ಕಾರ್ಯಾಚರಣೆ ನಡೆದ ಪರಿಣಾಮ 17 ಟನ್ ಪಡಿತರ ಅಕ್ಕಿ ಹಾಗೂ ಲಾರಿ ವಶ ಪಡಿಸಿಕೊಂಡ ಘಟನೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ  ನಾಲ್ವರ ಬಂಧನ ಮಾಡಲಾಗಿದೆ. ತಡರಾತ್ರಿ ಕಾರ್ಯಾಚರಣೆ ನಡೆಸಿದ ಡಿಸಿಬಿ ಪೊಲೀಸರು, ಅಬ್ದುಲ್ ಲತೀಫ್ (64) ಇಸಾರ್ ಅಲಿ (35), ರಜಾಕ್ (27) ನಜೀರ್ (33) ಬಂಧನ ಮಾಡಿದ್ದಾರೆ.

ಬಡವರಿಗೆ ವಿತರಿಬೇಕಾದ ಪಡಿತರ ಅಕ್ಕಿಯನ್ನ ಅಕ್ರಮವಾಗಿ ಬೇರೆ ಕಡೆ ಸಾಗಿಸಲಾಗುತ್ತಿತ್ತು. ಮಲೇಬೆನ್ನೂರನಲ್ಲಿ ಈ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರ ಗ್ರಾಮದಲ್ಲಿ ಡಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಮಲೇಬೆನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ