ಹೂಳು ತುಂಬಿಕ ಕಲ್ಯಾಣಿಗೆ ಬಿದ್ದು ಬಾಲಕಿಯೋರ್ವಳು ಮೃತ

ಶನಿವಾರ, 29 ಏಪ್ರಿಲ್ 2023 (19:00 IST)
ಹೂಳು ತುಂಬಿಕ ಕಲ್ಯಾಣಿಗೆ ಬಿದ್ದು ಬಾಲಕಿಯೋರ್ವಳು ಮೃತಪಟ್ಟ ದಾರುಣ ಘಟನೆ ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ನಡೆದಿದೆ.‌ 15 ವರ್ಷದ ಹರ್ಷಿತಾ ಮೃತ ನತದೃಷ್ಟೆ‌. ಸಹೋದರನ ಜೊತೆ ಹೋಗುತ್ತಿದ್ದಾಗ ಆಯತಪ್ಪಿ ಇಬ್ಬರೂ ಕಲ್ಯಾಣಿಗೆ ಬಿದ್ದಿದ್ದಾರೆ. ಹೂಳು ತುಂಬಿದ ಪರಿಣಾಮ ಮೇಲೆ ಬರಲು ಸಾಧ್ಯವಾಗದೇ ಇಬ್ಬರು ಮುಳುಗಿದ್ದಾರೆ. ಸ್ಥಳೀಯರು ರಕ್ಷಣೆ ಮಾಡಿದರಾದ್ರೂ ಬಾಲಕಿಯ ಜೀವವನ್ನ ಉಳಿಸಲು ಆಗಿಲ್ಲ‌. ಅಭಿಲಾಷ್ (6) ಪ್ರಾಣಾಪಾಯದಿಂದ ಅದೃಷ್ಟವಶಾತ್ ಪಾರಾಗಿದ್ದಾನೆ. ಕಲ್ಯಾಣಿಗೆ ಬೇಲಿ ಕೂಡ ಹಾಕದೇ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ನಂದಗುಡಿ ಗ್ರಾ.ಪಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿಯಾಗಿದ್ದಾಳೆಂದು ಸ್ಥಳೀಯರು ಆರೋಪಿಸ್ತಿದ್ದಾರೆ‌‌.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ