ಕುಡಿಯಲು ಹಣ ಕೊಡದಕ್ಕೆ ನೀಚ ಕೆಲಸ ಮಾಡಿದ ಯುವಕ

ಬುಧವಾರ, 8 ಜುಲೈ 2020 (16:35 IST)
ಮದ್ಯ ಕುಡಿಯುವುದಕ್ಕೆ ಹಣ ಕೊಡದ ಕಾರಣ ಯುವಕನೊಬ್ಬ ಮಾಡಬಾರದ ನೀಚ ಕೆಲಸ ಮಾಡಿದ್ದಾನೆ.

ಕೊರೊನಾ ಎಫೆಕ್ಟ್ ನಿಂದಾಗಿ ಕೆಲಸ ಸಿಗದೇ ಮನೆಯಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಕುಡಿಯೋಕೆ ಅಂತ ತನ್ನ ಅಜ್ಜಿಗೆ ಹಣ ಕೇಳಿದ್ದಾನೆ. ಆದರೆ ಹಣ ಕೊಡದ ಕಾರಣಕ್ಕೆ ಅಜ್ಜಿಯನ್ನೇ ಭೀಕರವಾಗಿ ಕೊಲೆ ಮಾಡಿದ್ದಾನೆ.

ಕಿಟ್ಟಮ್ಮ (74) ಕೊಲೆಯಾಗಿದ್ದರೆ, ಮೊಮ್ಮಗನಾಗಿರುವ ಆರೋಪಿ ಅರುಣಕುಮಾರ್ (29) ಎಂಬಾತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಿವಮೊಗ್ಗದ ಭದ್ರಾವತಿಯ ತಾಸ್ಕೆಂಟ್ ಪ್ರದೇಶದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ