ಹುಬ್ಬಳ್ಳಿ ಯುವತಿ ಅಂಜಲಿ ಹತ್ಯೆಗೆ ಆರೋಪಿ ಗಿರೀಶನಿಗೆ ಸ್ನೇಹಿತನೇ ಪ್ರೇರಣೆ

Krishnaveni K

ಗುರುವಾರ, 16 ಮೇ 2024 (10:01 IST)
Photo Courtesy: Twitter
ಹುಬ್ಬಳ್ಳಿ: ನೇಹಾ ಹಿರೇಮಠ್ ಮಾದರಿಯಲ್ಲೇ ಹುಬ್ಬಳ್ಳಿಯಲ್ಲಿ ನಡೆದಿದ್ದ ಅಂಜಲಿ ಹತ್ಯೆ ಪ್ರಕರಣದ ಆರೋಪಿ ಗಿರೀಶನಿಗೆ ಆತನ ಸ್ನೇಹಿತನೇ ಸ್ಪೂರ್ತಿಯಾಗಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.

ತನ್ನ ಪ್ರೀತಿ ನಿರಾಕರಿಸಿದ್ದಕ್ಕೆ ಅಂಜಲಿಯ ಮನೆಗೆ ನುಗ್ಗಿ ಹೊಟ್ಟೆಗೆ, ಎದೆಗೆ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆ ಮಾಡಿದ್ದ. ಮನೆಯವರ ಸಮ್ಮುಖದಲ್ಲೇ ಈ ಹತ್ಯೆ ನಡೆದಿತ್ತು. ಕೃತ್ಯದ ಬಳಿಕ ಸ್ಥಳದಿಂದ ಆರೋಪಿ ಪರಾರಿಯಾಗಿದ್ದ. ಇದಕ್ಕೆ ಮೊದಲು ತಾನು ಕರೆದಲ್ಲಿಗೆ ಬರದೇ ಇದ್ದರೆ ನೇಹಾ ಮಾದರಿಯಲ್ಲೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಘಟನೆ ಬಳಿಕ ಆರೋಪಿ ಇದುವರೆಗೆ ಪೊಲೀಸರ ಕೈಗೆ ಸಿಗದೇ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಪೊಲೀಸರು ಎರಡು ತಂಡಗಳನ್ನು ರಚಿಸಿ ಹುಡುಕಾಟ ನಡೆಸುತ್ತಿದೆ. ಆರೋಪಿ ಗಿರೀಶನಿಗೆ ಸ್ನೇಹಿತ ಶೇಷ್ಯಾನೇ ಈ ಕೃತ್ಯಕ್ಕೆ ಪ್ರೇರಣೆ ಎಂದು ತಿಳಿದುಬಂದಿದೆ.

ಶೇಷ್ಯಾ ಕೂಡಾ ಎರಡು ದಿನಗಳ ಹಿಂದಷ್ಟೇ ಓರ್ವ ಯುವಕನನ್ನು ಹತ್ಯೆ ಮಾಡಿ ಜೈಲು ಸೇರಿದ್ದ. ಆತನ ಪ್ರೇರಣೆಯಿಂದಲೇ ಗಿರೀಶ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಇದಕ್ಕೆ ಮೊದಲು ಸಣ್ಣ ಪುಟ್ಟ ಕಳ್ಳತನ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಗಿರೀಶ ಈಗ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ