ನಟ ವಿಷ್ಣುವರ್ಧನ್ ಪ್ರತಿಮೆ ಧ್ವಂಸ; ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ ಸಚಿವ ಸೋಮಣ್ಣ

ಶನಿವಾರ, 26 ಡಿಸೆಂಬರ್ 2020 (11:51 IST)
ಬೆಂಗಳೂರು : ದಿವಂಗತ ನಟ ವಿಷ್ಣುವರ್ಧನ್ ಪ್ರತಿಮೆ ಧ್ವಂಸ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ವಿ.ಸೋಮಣ್ಣ ವಿಷ್ಣು ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸೋಮಣ್ಣ, ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಮಾಡಿಲ್ಲ. ಯಾರೋ ವಿಷ್ಣು ಪ್ರತಿಮೆ ಶಿಫ್ಟ್ ಮಾಡಿದ್ದಾರೆ. ಮಾತುಕತೆ ನಡೆಸಿಯೇ ಪ್ರತಿಮೆ ಸ್ಥಳಾಂತರ ಮಾಡಲಾಗಿದೆ. ಆ ಸರ್ಕಲ್ ಗೆ ಬಾಲಗಂಗಾಧರನಾಥ ಶ್ರೀವೃತ್ತ ಎಂಬ ಹೆಸರಿತ್ತು. ಆ ಸರ್ಕಲ್ ಗೆ ಶ್ರೀಗಳ ಹೆಸರು ಇಟ್ಟಿದ್ದೇವೆ. ಬಾಲಗಂಗಾಧರನಾಥ ಸ್ವಾಮೀಜಿ ಪ್ರತಿಮೆ ಪ್ರತಿಷ್ಠಾಪಿಸ್ತೇವೆ. ಈ ಬಗ್ಗೆ 40 ವರ್ಷಗಳ ಹಿಂದೆಯೇ ತೀರ್ಮಾನವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ