ಕೃತಿಕಾ ಸಾವನ್ನಪ್ಪಿದ ಬಳಿಕ ಮಹೇಂದ್ರ ರೆಡ್ಡಿ ಈ ವಿಚಾರಕ್ಕೆ ತುಂಬಾನೇ ಹಠ ಹಿಡಿದಿದ್ದಂತ್ತೆ

Sampriya

ಭಾನುವಾರ, 19 ಅಕ್ಟೋಬರ್ 2025 (18:13 IST)
ಬೆಂಗಳೂರು: ನಗರವನ್ನೇ ಬೆಚ್ಚಿಬೀಳಿಸಿದ ಡಾ.ಕೃತಿಕಾ ರೆಡ್ಡಿ ಹತ್ಯೆ ಪ್ರಕರಣ ಸಂಬಂಧ ಆಕೆಯ ತಾಯಿ, ವಕೀಲೆ ಸೌಜನ್ಯ ಅವರು ನನ್ನ ಮಗಳನ್ನು ಮುಗಿಸಲು ಕಳೆದ ವರ್ಷದ ಅಕ್ಟೋಬರ್‌ನಿಂದಲೇ ಮಹೇಂದ್ರ ರೆಡ್ಡಿ ಪ್ರಯತ್ನಿಸಿದ್ದ ಎಂದು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. 

ಇಂದು ಸುದ್ದಿಗೋಷ್ಠಿ ಮಾತನಾಡಿದ ಅವರು, ಮದುವೆ ಬಳಿಕ ಯಾವುದೇ ಸಣ್ಣ ಅನುಮಾನ ಬಾರದ ಹಾಗೇ ಮಹೇಂದ್ರ ರೆಡ್ಡಿ ನಡೆದುಕೊಂಡಿದ್ದಾರೆ. ಇನ್ನೂ ಕೃತಿಕಾಳನ್ನು ಸಾಯಿಸಲು 2024ಎ ಅಕ್ಟೋಬರ್ ನಿಂದಲೇ ಮಗಳ ಹತ್ಯೆಗೆ ಪ್ಲ್ಯಾನ್‌ ಮಾಡುತ್ತಿದ್ದ ಎಂದು ಆರೋಪ ಮಾಡಿದ್ದಾರೆ.

ಏಪ್ರಿಲ್ 22 ರಂದು ನಮ್ಮ ಮಗಳಿಗೆ ಐವಿ ಡ್ರಿಪ್ಸ್ ಹಾಕಿಕೊಂಡು ಕರೆದುಕೊಂಡು ಬಂದಿದ್ದ. ಬಳಿಕ ಏಪ್ರಿಲ್ 23 ರಂದು ನಾನು ನನ್ನ ಮಗಳು ಜೊತೆಯಲ್ಲಿ ಊಟ ಮಾಡಿದ್ದೆವು. ನಂತರ ರಾತ್ರಿ 9:30 ಕ್ಕೆ ರೂಂಗೆ ಹೋಗಿದ್ದರು. ಮರುದಿನ ಬೆಳಗ್ಗೆ 7:30 ಕ್ಕೆ ಅಳಿಯ ರೂಂನಿಂದ ಕಿರುಚಿಕೊಂಡಿದ್ದ. ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟ ವಿಚಾರ ಗೊತ್ತಾಯಿತು ಎಂದು ವಿವರಿಸಿದರು.

ಇನ್ನೂ ಸಾವನ್ನಪ್ಪಿದ ಬಳಿಕ ವೈದ್ಯನಾಗಿರುವ ನಾನು ಮರಣೋತ್ತರ ಪರೀಕ್ಷೆಯನ್ನ ನೋಡಬೇಕು ಎಂದು ಮಹೇಂದ್ರ ರೆಡ್ಡಿ ಹಠ ಹಿಡಿದಿದ್ದ. ಆದರೆ ವರದಿ ಬಂದ ಬಳಿಕವಷ್ಟೇ ನಮಗೆ ಈ ವಿಚಾರ ಗೊತ್ತಾಗಿತ್ತು. ಅವನ್ನೊಬ್ಬ ಗೋಮುಖ ವ್ಯಾಘ್ರ ಎಂದು ತಾಯಿ ತಮ್ಮ ನೋವು ಹೊರಹಾಕಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ