ತಬ್ಲಿಘಿ ನಂತರ ಈ ಊರಿಗೆ ಮುಂಬೈ ಮಾರಿ ಕಾಟ

ಸೋಮವಾರ, 25 ಮೇ 2020 (21:23 IST)
ತಬ್ಲಿಘಿ ನಂತರ ಮುಂಬೈ ಮಾರಿ ಕಾಟ ಈ ಊರಿಗೆ ಅಂಟಿಕೊಂಡಂತಿದೆ.

ಮಹಾರಾಷ್ಟ್ರ ರಾಜ್ಯ ಪ್ರವಾಸದಿಂದ‌ ಮರಳಿ ಕಲಬುರಗಿ ಜಿಲ್ಲೆಯ ಸರ್ಕಾರಿ ಕ್ವಾರಂಟೈನ್ ನಲ್ಲಿರುವ ಒಟ್ಟು 16 ಜನರಿಗೆ ಕೊರೊನಾ ಸೋಂಕು‌ ಪತ್ತೆಯಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.

ಚಿತ್ತಾಪುರ ತಾಲೂಕು, ಕಮಲಾಪೂರ ತಾಲೂಕು, ಕಾಳಗಿ ತಾಲೂಕಿನ ಕೆಲವು ಜನರು ಮಹಾರಾಷ್ಟ್ರದಿಂದ ಬಂದಿರುವುದರಿಂದ ಅವರಲ್ಲಿ ಕೊರೊನಾ ಕಾಣಿಸಿಕೊಂಡಿದೆ.

ಇದರಿಂದ ಕಲಬುರಗಿಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 157ಕ್ಕೆ ಹೆಚ್ಚಳವಾಗಿದೆ. ಇದರಲ್ಲಿ 72 ಜನ ಗುಣಮುಖರಾಗಿದ್ದರೆ, 7 ಜನರು ನಿಧನಹೊಂದಿದ್ದಾರೆ. ಉಳಿದಂತೆ 78 ಜನರಿಗೆ ಚಿಕಿತ್ಸೆ‌ ಮುಂದುವರೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ