ಮಂಗಳೂರಿನಲ್ಲಿ ತಪ್ಪಿದ ಭಾರೀ ವಿಮಾನ ದುರಂತ

ಸೋಮವಾರ, 1 ಜುಲೈ 2019 (10:55 IST)
ಮಂಗಳೂರು: ಇಲ್ಲಿನ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ವಿಮಾನ ದುರಂತವೊಂದು ನಡೆಯಬೇಕಿದ್ದಿದ್ದು, ಸ್ವಲ್ಪದರಲ್ಲೇ ತಪ್ಪಿದೆ.


183 ಪ್ರಯಾಣಿಕರನ್ನು ಹೊತ್ತಿದ್ದ ಏರ್ ಇಂಡಿಯಾ ವಿಮಾನ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಆದರೆ ಲ್ಯಾಂಡಿಂಗ್ ವೇಳೆ ರನ್ ವೇನಿಂದ ಸಾಕಷ್ಟು ಮುಂದೆ ಹೋಗಿ ಲ್ಯಾಂಡಿಂಗ್ ಆಗಿತ್ತು.

ಪೈಲಟ್ ನ ಸಮಯ ಪ್ರಜ್ಞೆಯಿಂದಾಗಿ 183 ಪ್ರಯಾಣಿಕರ ಜೀವ ಉಳಿದಿದೆ. ಇಲ್ಲದೇ ಹೋಗಿದ್ದರೆ 2010 ರಲ್ಲಿ ನಡೆದಿದ್ದ ಮಂಗಳೂರು ವಿಮಾನ ದುರಂತ ಪ್ರಕರಣದಂತಹ ಘಟನೆ ಮರುಕಳಿಸುತ್ತಿತ್ತು. ಘಟನೆ ಬಳಿಕ ವಿಮಾನ ನಿಲ್ದಾಣದಲ್ಲಿ ಕೆಲವು ಕಾಲ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ