ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಿದ್ರೆ ದರಿದ್ರ ಗ್ಯಾರಂಟಿ

ಸೋಮವಾರ, 6 ಮೇ 2019 (18:33 IST)
ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ದರಿದ್ರ ಗ್ಯಾರಂಟಿ ಎಂದು ವಿವಾದಿತ ಹೇಳಿಕೆ ಹೊರಬಿದ್ದಿದೆ.

ಮಾಜಿ ಶಾಸಕ ಸೋಮಶೇಖರ್ ಹೀಗಂತ ಭವಿಷ್ಯ ನುಡಿದಿದ್ದಾರೆ.

ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಅಕ್ಷಯವಾಗುವುದು ಎಂದು ಮುಗ್ಧ ಗ್ರಾಹಕರನ್ನು ನಂಬಿಸಿ   ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯಾವುದೇ ಪುರಾಣ  ಮಹಾಕಾವ್ಯಗಳಲ್ಲಿ ಉಲ್ಲೇಖವಾಗದ ಇಂತಹ ಮೌಡ್ಯವನ್ನು ಜನರಲ್ಲಿ ಬಿತ್ತುತ್ತಿರುವುದು ಅಕ್ಷಮ್ಯ. ಕಳೆದ ಹತ್ತು ಹದಿನೈದು ವರ್ಷಗಳಿಂದಲೂ ಇದೊಂದು ವ್ಯಾಪಾರ ತಂತ್ರವಾಗಿ ಬಳಸಲಾಗುತ್ತಿದ್ದು. ಈ ದಿನ ಖರೀದಿಸಿದ ಚಿನ್ನವೂ ಎಲ್ಲಿಯಾದರು ಅಕ್ಷಯವಾಗಿದ್ದರೆ ಅವರಿಗೆ ನಾನು 10 ಲಕ್ಷ ರೂ.ಗಳನ್ನು ನೀಡುವೆ ಎಂದು ಸವಾಲೆಸೆದರು.

ಶೇ. 80ರಷ್ಟು ಕೆಳ ಮಧ್ಯಮ, ಮಧ್ಯಮ ವರ್ಗದವರು ಸಂಬಳದಿಂದ ಜೀವನ ಸಾಗಿಸುತ್ತಿದ್ದು. ಅಂತಹವರು  ನಾಳೆ ಚಿನ್ನ ಖರೀದಿಸಲೇಬೇಕೆಂದು ಸಾಲ ಮಾಡುವರು. ಇದರಿಂದ ಬಡ್ಡಿ ಹೆಚ್ಚಾಗಿ ದರಿದ್ರ ಕಾಡುವುದೇ ಹೊರತು ಒಳಿತಾಗುವುದಿಲ್ಲ ಎಂದರು.
ವಿದ್ಯಾವಂತರೇ‌ ಇಂತಹ ಮೌಡ್ಯಾಚರಣೆಗೆ ಮುಂದಾಗಿರುವುದು ದೇಶದ ದೌರ್ಭಾಗ್ಯವೆಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ