ಸಿಎಂಗೆ ಕೊರೋನಾ: ಸರ್ವಪಕ್ಷಗಳ ಸಭೆ ರದ್ದು

ಶನಿವಾರ, 17 ಏಪ್ರಿಲ್ 2021 (10:17 IST)
ಬೆಂಗಳೂರು: ಸಿಎಂ ಯಡಿಯೂರಪ್ಪಗೆ ಕೊರೋನಾ ಸೋಂಕು ಹಿನ್ನಲೆಯಲ್ಲಿ ಸರ್ವಪಕ್ಷಗಳ ಸಭೆಯನ್ನು ಸದ್ಯದ ಮಟ್ಟಿಗೆ ಮುಂದೂಡಲಾಗಿದೆ.


ಸಿಎಂ ಇಲ್ಲದೇ ಸಭೆ ನಡೆಸುವುದು ಗಂಭೀರತೆ ಎನಿಸುವುದಿಲ್ಲ ಎಂಬ ಕಾರಣಕ್ಕೆ ಕೊರೋನಾ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕರೆದಿದ್ದ ಸರ್ವಪಕ್ಷಗಳ ಸಭೆಯನ್ನು ಮುಂದೂಡಲಾಗಿದೆ.

ಎರಡನೇ ಬಾರಿ ಕೊರೋನಾ ಸೋಂಕಿಗೊಳಗಾಗಿರುವ ಸಿಎಂ ಯಡಿಯೂರಪ್ಪ ಸದ್ಯಕ್ಕೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಇನ್ನು ಎರಡು-ಮೂರು ದಿನಗಳೊಳಗಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಚೇತರಿಸಿಕೊಂಡ ಬಳಿಕ ಸಭೆ ನಡೆಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ