ವ್ಯಕ್ತಿಯ ಜೀವಕ್ಕೆ ಕುತ್ತು ತಂದ ಅನೈತಿಕ ಸಂಬಂಧ

ಗುರುವಾರ, 9 ಜುಲೈ 2020 (08:31 IST)
ಚಿಂಚೋಳಿ : ಮಹಿಳೆಯೊಂದಿಗಿನ ಸೆಕ್ಸ್ ಸಂಬಂಧವೇ ವ್ಯಕ್ತಿಯೊಬ್ಬನ ಜೀವಕ್ಕೆ ಕುತ್ತು ತಂದ ಘಟನೆ ಚಿಂಚೋಲಿ ಪಟ್ಟಣದ ಸುಂದರನಗರದಲ್ಲಿ ನಡೆದಿದೆ.

ಸುರೇಶ್ ಧರ್ಮಣ್ಣ (43) ಮೃತಪಟ್ಟ ವ್ಯಕ್ತಿ. ಈತ ಒಬ್ಬ ವಿಧವಾ ಮಹಿಳೆಯೊಂದಿಗೆ ಒಂದು ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದ. ಆದರೆ ಇತ್ತೀಚೆಗೆ ಆಕೆ ಹೆಂಡತಿ ಮಕ್ಕಳನ್ನು ಬಿಟ್ಟು ತನ್ನನ್ನು ವಿವಾಹವಾಗುವಂತೆ  ಮಹಿಳೆ ಕಿರುಕುಳ ನೀಡುತ್ತಿದ್ದಳು. ಇದರಿಂದ ನೊಂದ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಆತನ ಪತ್ನಿ ಚಿಂಚೋಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ