ರೈತರಿಗೆ ಬ್ಯಾಂಕ್ ನೋಟಿಸ್: ಮಾಜಿ ಶಾಸಕರ ಸಹೋದರನಿಂದ ಗೋಲ್ ಮಾಲ್ ಶಂಕೆ!

ಗುರುವಾರ, 24 ಜನವರಿ 2019 (14:49 IST)
105 ರೈತರಿಗೆ ಎಸ್ ಬಿಐ ಬ್ಯಾಂಕ್ ನಿಂದ ಸಾಲ ಕಟ್ಟಲು‌ ನೋಟಿಸ್ ಜಾರಿ ಮಾಡಲಾಗಿದೆ.

105 ರೈತರಿಗೆ ತಲಾ ಏಳು ಲಕ್ಷ ಸಾಲ ತೋರಿಸಿರುವ ಕಲ್ಬುರ್ಗಿ ಎಸ್ ಬಿಐ ಬ್ಯಾಂಕ್, ಬಿಎಸ್ ಎಸ್ ಕೆ ಮಾಜಿ ಅಧ್ಯಕ್ಷ ಸಂಜಯ ಖೇಣಿ ಮತ್ತವರ ಟೀಮ್ ನಿಂದ ಏಳು ಕೋಟಿ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.
ಕಳೆದ 2015ರಲ್ಲಿ 105 ರೈತರ ಟ್ರಾಕ್ಟರ್ ಮೇಲೆ ತಲಾ ಏಳು ಲಕ್ಷ ಸಾಲ ಮಾಡಿಸಿ ರೈತರ ವಿಡ್ರಾಲ್ ಮುಖಾಂತರ ಹಣ ಅಧ್ಯಕ್ಷ ಸಂಜಯ ಖೇಣಿ ಎತ್ತುಕೊಂಡಿದ್ದರು ಎನ್ನಲಾಗಿದೆ.

ಸಂಜಯ ಖೇಣಿ ಮತ್ತವರ ತಂಡದ ವಿರುದ್ದ 420ಕೇಸ್ ದಾಖಲಿಸುವಂತೆ ಜಿಲ್ಲಾಧಿಕಾರಿಗೆ  ಮನವಿಯನ್ನು ರೈತರು ಸಲ್ಲಿಸಿದ್ದಾರೆ.
ಬ್ಯಾಂಕ್ ಅಧಿಕಾರಿಗಳು ಆಡಳಿತ ಮಂಡಳಿ ಅಧ್ಯಕ್ಷ ಸಂಜಯ ಖೇಣಿ  ಸೇರಿಕೊಂಡು ಭಾರಿ ಗೋಲ್ ಮಾಲ್ ನಡೆಸಿರುವ ಶಂಕೆ ವ್ಯಕ್ತವಾಗಿದೆ.  

ಮೂರು ವರ್ಷಗಳ ನಂತರ ನೋಟಿಸ್ ಬಂದಾಗಲೇ ಪ್ರಕರಣ ಬೆಳಕಿಗೆ ಬಂದಿದೆ. ಸಂಜಯ ಖೇಣಿ, ಮಾಜಿ ಶಾಸಕ ಅಶೋಕ ಖೇಣಿಯ ಸಹೋದರರಾಗಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ