ಅಳೋ ಗಂಡಸನ್ನ ನಂಬಬಾರದು, ನಿಖಿಲ್ ಕುಮಾರಸ್ವಾಮಿ ಕಾಲೇಳೆದ ಯೋಗೇಶ್ವರ್
ಕುಮಾರಸ್ವಾಮಿ ಅವರು ಏನೂ ಅಭಿವೃದ್ಧಿ ಮಾಡದೇ ಮಗನನ್ನು ತಂದು ನಿಲ್ಲಿಸಿದ್ದಾರೆ. ಈ ತಾಲ್ಲೂಕಿಗೆ ಯಾಕೆ ಕುಮಾರಸ್ವಾಮಿ ಬಂದ್ರು, ಯಾಕೆ ಬಿಟ್ಟುಹೋದ್ರೋ ಗೊತ್ತಿಲ್ಲ. ಕುಮಾರಸ್ವಾಮಿ ಎರಡು ಬಾರಿ ಗೆದ್ದು ಯಾವುದೇ ಅಭಿವೃದ್ಧಿ ಮಾಡಿಲ್ಲ. ಅವರದ್ದು ಸ್ವಾರ್ಥ ರಾಜಕಾರಣ. ಜನರ ಅಭಿವೃದ್ಧಿ ಮಾಡದೇ ಮಗನನ್ನ ತಂದು ನಿಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಅವರಿಗೆ ಜನವಿರೋಧಿ ಅಲೆ ಇದೆ ಎಂದು ಹೇಳಿದರು.