ಬೆಂಗಳೂರು ಉಸ್ತುವಾರಿ ಸಚಿವರದ ಸಿಎಂ ರಾಜ್ಯ ಪ್ರವಾಸದಲ್ಲಿ ಫುಲ್‌ ಬ್ಯುಸಿ

ಮಂಗಳವಾರ, 18 ಅಕ್ಟೋಬರ್ 2022 (18:22 IST)
ಬೆಂಗಳೂರಿನಲ್ಲಿ ರಸ್ತೆಗುಂಡಿಗಳ‌ ನರಕ ದರ್ಶನದಿಂದ ಜನ‌ ಬೇಸತ್ತು ಹೋಗಿದ್ದಾರೆ.ಭಾರೀ ಮಳೆಗೆ‌ ಕಿತ್ತು ಬರ್ತಿದೆ ರಸ್ತೆ, 2-3 ಅಡಿ ಗುಂಡಿ, ಆಳುದ್ದದ ಕೊಳವೆ ಬಾವಿ,ರಸ್ತೆಯ ಯಮಗುಂಡಿಗೆ ನಿತ್ಯ ಜನ ಪ್ರಾಣ ಕಳೆದುಕೊಳ್ತಿದ್ರೆ ಇತ್ತಾ ಬೆಂಗಳೂರು ಉಸ್ತುವಾರಿ ಸಚಿವರು ರಾಜ್ಯ ಪ್ರವಾಸದಲ್ಲಿ ಫುಲ್‌ ಬ್ಯುಸಿಯಾಗಿದ್ದಾರೆ.ಬೆಂಗಳೂರಿನ ಉಸ್ತುವಾರಿ ಹೊಣೆಹೊತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಸಿಲಿಕಾನ್ ಸಿಟಿಯ ಗುಂಡಿಗಳ ಬಗ್ಗೆ ತಲೆಕೆಡಿಸಿಕೊಳ್ತಿಲ್ಲ.ಗುಂಡಿಯಿಂದಾದ ಬಲಿ, ನರಕದರ್ಶನದ ಬಗ್ಗೆ ಕೇಳಿದ್ರೆ ಕಾಟಾಚಾರದ ಉತ್ತರ ಕೊಡ್ತಾರೆ.
 
ಮಳೆಗಾಲದಲ್ಲಿ ಎಲ್ಲಂದ್ರಲ್ಲಿ  BBMP, BESCOM, BWSSB ಯವರು ತೋಡುತ್ತಿದ್ದಾರೆ.ಸಂಪುಟ ವಿಸ್ತರಣೆ, ಜನಸಂಪರ್ಕ ಯಾತ್ರೆಯಲ್ಲಿ  ಬೆಂಗಳೂರು ಉಸ್ತುವಾರಿ ಸಚಿವರು ಫುಲ್ ಬ್ಯುಸಿಯಾಗಿದ್ದಾರೆ.ರಾಜಧಾನಿಯಲ್ಲಿ ದಿನನಿತ್ಯ ನರಕಸೃಷ್ಟಿಯಾಗ್ತಿದ್ರು ಯಾಕಿಷ್ಟು ಬೇಜವಾಬ್ದಾರಿ ಮುಖ್ಯಮಂತ್ರಿಗಳೇ?ನೀವು ಎಚ್ಚೆತ್ತುಕ್ಕೊಳ್ಳಲು ಇನ್ನೆಷ್ಟು ಸಾವು- ನೋವು ಬೇಕು ನಿಮಗೆ. ಇನ್ನಾದ್ರು ಎಚ್ಚೇತ್ತುಕೊಳ್ಳಿ ಜನರ ಸಮಸ್ಯೆ ಬಗೆಹಾರಿಸಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ