ಬೆಂಗಳೂರಿಗೆ ಕರೆಂಟ್ ಶಾಕ್ ನೀಡಿದ ಬೆಸ್ಕಾಂ

ಶನಿವಾರ, 11 ಮೇ 2019 (11:29 IST)
ಬೆಂಗಳೂರು : ಬೆಂಗಳೂರಿನ ಜನರಿಗೊಂದು ಶಾಕಿಂಗ್ ನ್ಯೂಸ್. ಬೆಂಗಳೂರಿನ ಹಲವಡೆ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತಿಳಿಸಿದೆ.




220 ಕೆ.ವಿ.ಎನ್‍.ಆರ್‍.ಎಸ್ ವಿದ್ಯುತ್ ಕೇಂದ್ರದಲ್ಲಿ ತುರ್ತು ನಿರ್ವಹಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಶನಿವಾರ ಬೆಳಗ್ಗೆ 8 ರಿಂದ ಭಾನುವಾರ ರಾತ್ರಿ 8 ಗಂಟೆವರೆಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತಿಳಿಸಿದೆ.


ವಿಜಯನಗರ, ನಾಗರಬಾವಿ, ಕಾಮಾಕ್ಷಿಪಾಳ್ಯ, ಕೊಡಿಗೇಹಳ್ಳಿ, ಉಲ್ಲಾಳ, ಜ್ಞಾನಭಾರತಿ, ನಾಗರಬಾವಿ, ಚಂದ್ರಾ ಲೇಔಟ್, ಮೂಡಲಪಾಳ್ಯ, ಹಂಪಿನಗರ, ಮಲ್ಲತಹಳ್ಳಿ, ಅತ್ತಿಗುಪ್ಪೆ, ಕೆಂಗೇರಿ ಸ್ಯಾಟಲೈಟ್ ಟೌನ್, ಚಾಮರಾಜಪೇಟೆ, ಮೈಸೂರು ರಸ್ತೆಯ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ