ಬಸವನಗುಡಿ ನಿವಾಸಿಗಳಿಗೆ ಎದುರಾಯ್ತು ಪಕ್ಷಿ ಕಂಟಕ!

ಗುರುವಾರ, 13 ಜುಲೈ 2023 (19:16 IST)
ಪಾರಿವಾಳಗಳ ಕಾಟಕ್ಕೆ ಬಸವನಗುಡಿ ನಿವಾಸಿಗಳು ಬೇಸತ್ತಿದ್ದಾರೆ.ಸಜ್ಜನ್ ರಾವ್ ಸರ್ಕಲ್ ಸುತ್ತಮುತ್ತ ಪಾರಿವಾಳಗಳಿಗೆ ಜನರು ಆಹಾರ ನೀಡ್ತಿದ್ದರು.ಇದರಿಂದ ವಾಸನೆ,ಶಬ್ದದಿಂದ ನಿವಾಸಿಗಳಿಗೆ ಕಿರಿಕಿರಿಯಾಗಿದೆ.ಪಾರಿವಾಳಗಳಿಂದ ಸೋಂಕಿಗೆ ಸ್ಥಳೀಯರು ತುತ್ತಾಗಿದ್ದು.ಈ ಬಗ್ಗೆ ಬಸವನಗುಡಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ದೂರು ನೀಡಲಾಗಿದೆ.ಪಾರಿವಾಳಗಳಿಗೆ ಆಹಾರ ನೀಡೋದಕ್ಕೆ ಬ್ರೇಕ್ ಹಾಕಲು ಪಾಲಿಕೆಗೆ ಜನರ ಮನವಿ  ಬೆನ್ನಲ್ಲೆ ಪಾಲಿಕೆ ಬ್ಯಾನರ್ ಅಳವಡಿಸಿದೆ.ಪಾರಿವಾಳಗಳಿಗೆ ಆಹಾರ ನೀಡಬೇಡಿ ಅಂತಾ ಎಚ್ಚರಿಕೆ ನೀಡಿದೆ.ಆಹಾರ ನೀಡಿದ್ರೆ ಕ್ರಮ ತೆಗೆದುಕೊಳ್ಳಲಾಗುತ್ತೆ ಅಂತಾ ಬ್ಯಾನರ್ ನಲ್ಲಿ ಉಲ್ಲೇಖಿಸಲಾಗಿದೆ. ಒಟ್ನಲ್ಲಿ ಮೂಕ ಪಕ್ಷಿಗಳಿಂದ ಬೇಸತ್ತು ಜನರು ಪಾಲಿಕೆ ಮೊರೆಹೋಗುವಂತಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ