ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್

ಬುಧವಾರ, 4 ಡಿಸೆಂಬರ್ 2019 (10:44 IST)
ಶಿವಾಜಿನಗರ : ಡಿಸೆಂಬರ್ 5 ರಂದು ಶಿವಾಜಿನಗರ ಕ್ಷೇತ್ರದ ಉಪಚುನಾವಣೆಯ ಹಿನ್ನಲೆ ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ.



ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸರವಣ ಕಣಕ್ಕೀಳಿಯುತ್ತಿದ್ದು, ಅವರನ್ನು ಗೆಲ್ಲಿಸಿದ್ರೆ ಅನರ್ಹ ಶಾಸಕ ರೋಷನ್ ಬೇಗ್ ಗೆ ಮಂತ್ರಿಗಿರಿ ನೀಡುವುದಾಗಿ  ಬಿಜೆಪಿ ಆಫರ್ ನೀಡಿದೆ ಎನ್ನಲಾಗಿದೆ.


ಈ ಬಗ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ನಿನ್ನೆ ಬೇಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಏಫ್ರಿಲ್ ನಲ್ಲಿ ವಿಧಾನಪರಿಷತ್ ಸ್ಥಾನ ಖಾಲಿಯಾಗುತ್ತದೆ. ಸರವಣ ಅವರನ್ನ ಗೆಲ್ಲಿಸಿದ್ರೆ ನಿಮ್ಮನ್ನ ಎಂಎಲ್ ಸಿ ಮಾಡ್ತೀವಿ. ವಕ್ಫ್ ಖಾತೆಯನ್ನ ನೀಡುವುದಾಗಿ ಬೇಗ್ ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ