ಶಾಸಕರ ವಿರುದ್ಧ ಹಕ್ಕು ಚ್ಯುತಿಗೆ ಮುಂದಾದ ಬಿಜೆಪಿ

ಶುಕ್ರವಾರ, 19 ಜುಲೈ 2019 (19:41 IST)

ಮೈತ್ರಿ ಪಕ್ಷಗಳ ಶಾಸಕರ ವಿರುದ್ಧ ಹಕ್ಕು ಚ್ಯುತಿಗೆ ಬಿಜೆಪಿ ಮುಂದಾಗಿದೆ.

ಸಭಾಧ್ಯಕ್ಷರ ಗಮನಕ್ಕೆ ವಿಷಯವನ್ನು ತಿಳಿಸದೇ ಬಿಜೆಪಿ ವಿರುದ್ಧ ಶಾಸಕ ಶ್ರೀನಿವಾಸ ಗೌಡ ಆಧಾರ ರಹಿತ ಆರೋಪ ಮಾಡಿದ್ದಾರೆ.

ಬಿಜೆಪಿಯ ಶಾಸಕರು ಹಾಗೂ ಮುಖಂಡರು 5 ಕೋಟಿ ರೂಪಾಯಿಗಳನ್ನು ಅವರ ಮನೆಯಲ್ಲಿ ಇಟ್ಟು ಹೋದ್ರು ಅಂತ ಪದೇ ಪದೇ ಹೇಳಿದ್ದಾರೆ. ಹೀಗಾಗಿ ಅವರ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡ್ತೇವೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿ ವಿರುದ್ಧ ಆಧಾರ ರಹಿತ ಹಾಗೂ ಕಲಾಪದಲ್ಲೇ ದುರುದ್ದೇಶಪೂರ್ವಕವಾಗಿ ಗಂಭೀರ ಮಾಡಿದ್ದಾರೆ. ಅಲ್ಲದೇ ಹೆಚ್.ವಿಶ್ವನಾಥ್ ಅವರಿಗೆ 28 ಕೋಟಿ ಆಫರ್ ನೀಡಲಾಗಿದೆ ಎಂದಿರುವ ಸಾರಾ ಮಹೇಶ್ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಅಂತ ಯಡಿಯೂರಪ್ಪ ಹೇಳಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ