ಸಿದ್ದಗಂಗಾ ಶ್ರೀಗೆ ಸಚಿವ ಖರ್ಗೆ ಅಪಮಾನ: ಬಿಜೆಪಿ ಆರೋಪ

ಶುಕ್ರವಾರ, 25 ಜನವರಿ 2019 (15:37 IST)
ಮಾಧ್ಯಮದ ವಿರುದ್ಧ ನೀಡಿರುವ ಅನುಚಿತ ಹೇಳಿಕೆ ಖಂಡಿಸಿ ಹಾಗೂ ಸಚಿವ ಪ್ರಿಯಾಂಕ ಖರ್ಗೆಯವರು ಸಿದ್ದಗಂಗಾ ಶ್ರೀ ಗಳಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ.

ಬೀದರ್ ನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆದಿದೆ. ಬೀದರ್ ಸಂಸದ ಭಗವಂತ ಖೂಬಾ  ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಸಚಿವ ಪ್ರಿಯಾಂಕ ಖರ್ಗೆ ಸಚಿವಸ್ಥಾನಕ್ಕೆ  ರಾಜೀನಾಮೆ ನೀಡುವಂತೆ ಒತ್ತಾಯ ಮಾಡಲಾಯಿತು.

ಮಾಧ್ಯಮದವರು ಭಯೋತ್ಪಾದಕರಿಗಿಂತಲೂ ಡೇಂಜರ್ ಎಂದಿರುವ ಸಚಿವರ ಹೇಳಿಕೆಗೆ ಖಂಡಿಸಿದ ಪ್ರತಿಭಟನಾಕಾರರು, ಇದು  ಕಾಂಗ್ರೆಸ್ ಸಂಸ್ಕೃತಿಯನ್ನ  ಬಿಂಬಿಸುತ್ತದೆ ಎಂದು ದೂರಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ