ಜೆಡಿಎಸ್ ಕಾಂಗ್ರೆಸ್​ನ ಬಿಟೀಂ : ಅಶ್ವಥ್ ನಾರಾಯಣ ಆರೋಪ

ಶನಿವಾರ, 29 ಏಪ್ರಿಲ್ 2023 (14:30 IST)
ಹಾಸನ ಸೇರಿದಂತೆ ರಾಜ್ಯದ ಯಾವ ಕ್ಷೇತ್ರದಲ್ಲಿಯೂ ಯಾವ ಪಕ್ಷದ ಜೊತೆಯೂ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿಲ್ಲ.. ಎಲ್ಲ 224 ಕ್ಷೇತ್ರದಲ್ಲಿಯೂ ಬಿಜೆಪಿ ಪ್ರಬಲ ಹೋರಾಟ ಮಾಡುತ್ತೇವೆ ಎಂದು ಸಚಿವ ಅಶ್ವಥ್ ನಾರಾಯಣ ಸ್ಪಷ್ಟನೆ ನೀಡಿದ್ರು...ಪ್ರೀತಂಗೌಡ ಹೇಳಿಕೆ ಪಕ್ಷದ ಹೇಳಿಕೆಯಲ್ಲ. ನಮಗೆ ಜೆಡಿಎಸ್ ಪಕ್ಷವೇ ಮೊದಲ ಎದುರಾಳಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ. ಜೆಡಿಎಸ್ ಗೆ ಹಾಕುವ ಮತ ಬಿಜೆಪಿಗೆ ಹಾಕಿದಂತೆಯೇ. ರಾಷ್ಟ್ರೀಯ ನಾಯಕರ ಮಟ್ಟದಲ್ಲಿ ಹೊಂದಾಣಿಕೆ ಆಗಿದೆ ಎನ್ನುವ ಪ್ರೀತಂಗೌಡ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ. ಇದು ಅವರ ವೈಯಕ್ತಿಕ ಹೇಳಿಕೆಯಾಗಿದೆ. ನಮ್ಮ ಮೊದಲ ಪ್ರತಿಸ್ಪರ್ಧಿಯೇ ಜೆಡಿಎಸ್. ಯಾವ ಕಾರಣಕ್ಕೂ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. 224 ಕ್ಷೇತ್ರದಲ್ಲೂ ನಾವು ಸ್ಪರ್ಧೆ ಮಾಡಿದ್ದು, ಹೋರಾಟ ಮಾಡುತ್ತೇವೆ. ಎಲ್ಲಿಯೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಜೆಡಿಎಸ್ ಕಾಂಗ್ರೆಸ್​ನ ಬಿಟೀಂ ಆಗಿದೆ. ನಾವು ನಂಬರ್ ಒನ್ ವಿರೋಧ ಪಕ್ಷವಾಗಿ ಕಾಂಗ್ರೆಸ್ ಅನ್ನು ಪರಿಗಣಿಸಿದ್ದೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ