ರಾಜ್ಯದ ಅಯ್ಯಪ್ಪಸ್ವಾಮಿ ಭಕ್ತರಿದ್ದ ಬಸ್ ಬೆಂಕಿಗೆ ಆಹುತಿ

ಶನಿವಾರ, 15 ಫೆಬ್ರವರಿ 2020 (17:47 IST)
ರಾಜ್ಯದಿಂದ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದ ಭಕ್ತರಿದ್ದ ಬಸ್  ಬೆಂಕಿ ಹೊತ್ತುಕೊಂಡು ಉರಿದ ಘಟನೆ ನಡೆದಿದೆ. 


ಮೈಸೂರಿನ ಹೂಟಗಳ್ಳಿ ಗ್ರಾಮದ 25 ಅಯ್ಯಪ್ಪ ಸ್ವಾಮಿ ಭಕ್ತರು ಕೇರಳದ ಪಂಪಾ ನದಿಗೆ ಪ್ರಯಾಣಿಸುತ್ತಿದ್ದರು. ಆಗ ಭಕ್ತರಿದ್ದ ಬಸ್ ಗೆ ಏಕಾಏಕಿಯಾಗಿ ಟೈರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ.

ಸುತ್ತಮುತ್ತಲಿನ ಜನರು ಧಾವಿಸಿ ಬಸ್ ನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ.

ರಾಜ್ಯದ ಅಯ್ಯಪ್ಪ ಸ್ವಾಮಿ ಭಕ್ತರು ದರ್ಶನ ಮುಗಿಸಿಕೊಂಡು ತಮ್ಮ ಹಳ್ಳಿಗೆ ಮರಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ