ರಾಜಧಾನಿ ಗಲಭೆ : ಎಡಿಜಿಪಿ ಖಡಕ್ ಮಾತು ಏನು ಗೊತ್ತಾ?

ಬುಧವಾರ, 12 ಆಗಸ್ಟ್ 2020 (23:11 IST)
ರಾಜಧಾನಿ ಬೆಂಗಳೂರಿನ ಎರಡ್ಮೂರು ಪ್ರದೇಶಗಳಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಎಡಿಜಿಪಿ ಖಡಕ್ ಸೂಚನೆ ಕೊಟ್ಟಿದ್ದಾರೆ.


ಯಾವುದೇ ಪರಿಸ್ಥಿತಿ ಎದುರಿಸೋಕೆ ಸಿದ್ಧರಾಗಬೇಕು ಎಂದು ಕೆಎಸ್ ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಸೂಚನೆ ಕೊಟ್ಟಿದ್ದಾರೆ.

ಗಲಭೆಯಲ್ಲಿ ಕೆಲವರು ಪೊಲೀಸ್ ವಾಹನ ಜಖಂಗೊಳಿಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.

ಹೀಗಾಗಿ ಪೊಲೀಸರ ಮೇಲೆ ನಡೆದ ಹಲ್ಲೆ ಹಾಗೂ ಹಾನಿಯ ಕುರಿತು ಅಲೋಕ್ ಕುಮಾರ್ ಮಾಹಿತಿ ಸಂಗ್ರಹ ಮಾಡಿದ್ದಾರೆ. ಅಷ್ಟೇ ಅಲ್ಲ, ಗಾಯಾಳು ಪೊಲೀಸರ ಯೋಗಕ್ಷೇಮ ವಿಚಾರಿಸಿ ಘಟನೆಯ ವಿವರ ಪಡೆದುಕೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ