ಕಾರು ಡಿಕ್ಕಿ, ಯುವಕ ಸಾವು

ಮಂಗಳವಾರ, 25 ಜುಲೈ 2023 (14:20 IST)
ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕೌದಳ್ಳಿ ಗ್ರಾಮದ ಬಳಿ ನಡೆದಿದೆ. ಬೆಂಗಳೂರಿನ ಮಾಗಡಿ ನಿವಾಸಿ ಯಶ್ವಂತ್ KSRTC ಬಸ್‌ನಲ್ಲಿ ಪ್ರಯಾಣ ಮಾಡ್ತಿದ್ದ ವೇಳೆ ಬಸ್‌ ಟಯರ್ ಪಂಚರ್ ಆಗಿದೆ. ಆ ವೇಳೆ ಡ್ರೈವರ್ ಮತ್ತು ಕಂಡಕ್ಟರ್ ಟೈಯರ್ ಬದಲಿಸಲು ಕೆಳಗಿಳಿದಿದ್ದಾರೆ. ಬೆಳಗಿನ ನಸುಕಿವ ಜಾವವಿದ್ದ ಕಾರಣ ಯಶ್ವಂತ್ ಟಯರ್ ಬದಲಾಯಿಸಲು ಟರ್ಚ್ ಹಾಕಿಕೊಂಡು ನಿಂತು ಸಹಾಯ ಮಾಡ್ತಿದ್ದ, ಈ ವೇಳೆ ವೇಗವಾಗಿ ಬಂದ ಕಾರೊಂದು ಯಶ್ವಂತ್‌ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಯಶ್ವಂತ್ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ