ಅನಾಥ ಶವಕ್ಕೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಶಾಸಕ

ಭಾನುವಾರ, 5 ಆಗಸ್ಟ್ 2018 (14:47 IST)
ಭುವನೇಶ್ವರ : ಅನಾಥವಾಗಿ ಬಿದ್ದಿದ್ದ ಮಹಿಳೆಯೊನ್ನಳ ಶವಕ್ಕೆ ಅಂತ್ಯಸಂಸ್ಕಾರ ಮಾಡಲು ಗ್ರಾಮದ ಜನರು ಹಿಂದೆಮುಂದೆ ನೋಡುತ್ತಿದ್ದಾಗ ಶಾಸಕರೊಬ್ಬರು ಆ ಶವಕ್ಕೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.


ಒಡಿಶಾದ ಝರ್ಸುಗುಡದ ಆಮ್ನಪಾಲಿ ಗ್ರಾಮದಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯೋರ್ವಳು ಆಕಸ್ಮಿಕವಾಗಿ ಸಾವನ್ನಪ್ಪಿದ್ದಳು. ಆದರೆ ಊರಿನವರು ಜಾತಿ, ನಂಬಿಕೆ ಕಾರಣ ನೀಡಿ ಶವ ಸಂಸ್ಕಾರ ಮಾಡಲು ಹಿಂಜರಿದಿದ್ದಾರೆ.


ಈ ವಿಚಾರ ತಿಳಿದ ರೆಂಗಾಲಿ ಕ್ಷೇತ್ರದ ಬಿಜೆಡಿ ಎಂಎಲ್​ಎ ರಮೇಶ್​ ಪಟುವಾ ತಕ್ಷಣ ತನ್ನ ಮಗ ಹಾಗೂ ಸೋದರಳಿಯನನ್ನು ಸ್ಥಳಕ್ಕೆ ಹೋಗಿ, ಸ್ಮಶಾನಕ್ಕೆ ಹೆಣ ಹೊತ್ತುತರುವಂತೆ ತಿಳಿಸಿದ್ದಾರೆ.  ಆ ಗ್ರಾಮ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿಲ್ಲ ಎಂದು ತಿಳಿದಿದ್ದರೂ ಮಾನವೀಯತೆಯಿಂದ ಆಕೆಯ ಶವಕ್ಕೆ ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ