‘ನಾನು ಹಲವು ಭಾಗ್ಯಗಳನ್ನು ಕೊಟ್ಟೆ, ಯಡಿಯೂರಪ್ಪ ಸೈಕಲ್ ಸೀರೆ ಮಾತ್ರ ಕೊಟ್ಟಿದ್ದಾರೆ’

ಭಾನುವಾರ, 4 ಮಾರ್ಚ್ 2018 (15:19 IST)
ಬೆಂಗಳೂರು: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಸಿದ್ದರಾಮಯ್ಯ ನಾನು ರಾಜ್ಯದ ಜನತೆಗೆ ಹಲವು ಭಾಗ್ಯಗಳನ್ನು ಕೊಟ್ಟೆ. ಆದರೆ ಯಡಿಯೂರಪ್ಪನವರು ಸೀರೆ, ಸೈಕಲ್ ಮಾತ್ರ ಕೊಟ್ಟರು ಎಂದು ಲೇವಡಿ ಮಾಡಿದ್ದಾರೆ.

ರಾಜ್ಯದ ಜನತೆಗೆ ಇಷ್ಟೆಲ್ಲಾ ಭಾಗ್ಯಗಳನ್ನು ಕೊಟ್ಟ ಮೇಲೂ ನಮ್ಮದು 10 ಪರ್ಸೆಂಟ್ ಕಮಿಷನ್ ಸರ್ಕಾರ ಎನ್ನುತ್ತಾರೆ. ಜೈಲಿಗೆ ಹೋದವರನ್ನೆಲ್ಲಾ ಪಕ್ಕದಲ್ಲಿ ಕೂರಿಸಿಕೊಂಡು ಮೋದಿ ಈ ರೀತಿ ಹೇಳೋದು ಸರೀನಾ? ಎಂದು ಸಿಎಂ ಪ್ರಶ್ನಿಸಿದ್ದಾರೆ.

ಬರೀ ಸೀರೆ ಸೈಕಲ್ ಕೊಟ್ಟಿದ್ದಕ್ಕೇ ಇಷ್ಟೆಲ್ಲಾ ಆಡ್ತಾರೆ. ನಮ್ಮದು ಕಮಿಷನ್ ಸರ್ಕಾರ ಅಂತಾರೆ. ಅದನ್ನೇ ತಿರುಗಾ ಮುರುಗಾ ಹೇಳಕ್ಕೆ ಇವರಿಗೆ ನಾಚಿಕೆ ಆಗಲ್ವಾ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ