ಅತೃಪ್ತ ಶಾಸಕರ ಸಮಾಧಾನಕ್ಕೆ ಕಾಂಗ್ರೆಸ್ ತಂತ್ರ; ನಿಗಮ ಮಂಡಳಿಗಳ ಭರ್ತಿಗೆ ಚಿಂತನೆ

ಮಂಗಳವಾರ, 18 ಜೂನ್ 2019 (11:38 IST)
ಬೆಂಗಳೂರು : ಅತೃಪ್ತ ಶಾಸಕರ ಸಮಾಧಾನಕ್ಕೆ ಮುಂದಾದ ಕಾಂಗ್ರೆಸ್ ನಾಯಕರು ತಿಂಗಳೊಳಗೆ ನಿಗಮ ಮಂಡಳಿಗಳ ಭರ್ತಿಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.




ಕಾಂಗ್ರೆಸ್ ನಾಯಕರು ಅತೃಪ್ತ ಶಾಸಕರು ಸಮಾಧಾನಗೊಳಿಸಲು ಬಾಕಿ ಉಳಿದಿರುವ 32 ನಿಗಮ ಮಂಡಳಿಗಳ ಭರ್ತಿಗೆ ಚಿಂತನೆ ನಡೆಸಿದೆ. ಅಲ್ಲದೇ  ಹಾಲಿ ಶಾಸಕರಿಗೆ ಸ್ಥಾನ ನೀಡಿ ಸಮಾಧಾನಪಡಿಸಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. 


ಮೊದಲು 10 ನಿಗಮಗಳಿಗೆ ಅಧ್ಯಕ್ಷರ ನೇಮಕಾಂತಿಗೆ ಆದ್ಯತೆ ನೀಡಲಾಗಿದ್ದು, ಕಾಂಗ್ರೆಸ್ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ, ಮಹೇಶ್ ಕುಮಟಳ್ಳಿ, ಎಸ್.ರಾಮಪ್ಪ, ಭೀಮಾನಾಯ್ಕ್, ಸೇರಿದಂತೆ 10 ಶಾಸಕರಿಗೆ ಮೊದಲಿಗೆ ಸ್ಥಾನ ನೀಡಿಕೆ ಸಾಧ್ಯತೆ ಇದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ