ಕೊರೊನಾ ಭೀತಿ ಹಿನ್ನಲೆ; ಇಂದು ಆರೋಗ್ಯ ಅಧಿಕಾರಿಗಳ ಜೊತೆ ಸಿಎಂ ಸಭೆ

ಶನಿವಾರ, 11 ಏಪ್ರಿಲ್ 2020 (10:29 IST)

ಬೆಂಗಳೂರು : ಕೊರೊನಾ ಅಟ್ಟಹಾಸಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಆತಂಕಗೊಂಡಿದ್ದು, ಇಂದು ಆರೋಗ್ಯ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
 


 

ವೈರಸ್ ನಿಯಂತ್ರಣ ಹೇಗೆ ಅನ್ನೋದೆ ಸಿಎಂ ಬಿಎಸ್ ವೈ ಗೆ ತಲೆನೋವಾಗಿ ಪರಿಣಮಿಸಿದ್ದು, ಆರೋಗ್ಯ ಅಧಿಕಾರಿಗಳ ಜೊತೆ ಬಿಎಸ್ ವೈ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಕಲೆಹಾಹುತ್ತಿದ್ದಾರೆ ಎನ್ನಲಾಗಿದೆ.

 

ಇಂದು 11 ಗಂಟೆಗೆ ಪ್ರಧಾನಿ ಮೋದಿ ಜೊತೆಗಿನ  ಸಂವಾದಕ್ಕೂ ಮುನ್ನ ಬೆಳಿಗ್ಗೆ 10.30ಕ್ಕೆ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಬಿಎಸ್ ವೈ ಸಭೆ ನಡೆಸಲಿದ್ದು ಇದರಲ್ಲಿ ಗೃಹ ಸಚಿವ ಬೊಮ್ಮಾಯಿ, ಆರೋಗ್ಯ ಸಚಿವ ರಾಮುಲು, ಸುಧಾಕರ್ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ