ನನ್ನ ಮರ್ಡರ್ ಮಾಡೋದೇ ನಿಮ್ಮ ಪ್ಲ್ಯಾನ್: ಪೊಲೀಸರ ಜೊತೆ ಸಿಟಿ ರವಿ ಜಟಾಪಟಿ ವಿಡಿಯೋ
ನನ್ನನ್ನು ಕೊಲೆ ಮಾಡಕ್ಕೇ ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ ನೀವು. ಇಲ್ಲಾಂದ್ರೆ ರಾತ್ರಿಯಿಡೀ ಹೀಗೆ ಸುತ್ತಾಡಿಸುತ್ತಿರುವುದು ಯಾಕೆ. ಏನು ನಿಮ್ಮ ಉದ್ದೇಶ ಎಂದು ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಸಮಾಧಾನಿಸಲು ಪ್ರಯತ್ನಿಸಿದರೂ ಅವರು ಸುಮ್ಮನಾಗಲಿಲ್ಲ. ನನ್ನ ಜೀವಕ್ಕೆ ಏನೇ ಆದರೂ ಅದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಡಿಕೆ ಶಿವಕುಮಾರ್ ಅವರೇ ಕಾರಣ ಎಂದಿದ್ದಾರೆ.
ಹಣೆಯ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು ಪೊಲೀಸರು ವಿಳಂಬ ಮಾಡಿದ್ದಾರೆ. ಹಣೆಯಿಂದ ರಕ್ತ ಸುರಿಯುತ್ತಿದ್ದರೂ ಊರಿಡೀ ಪೊಲೀಸ್ ವಾಹನದಲ್ಲಿ ಸುತ್ತಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಫೋನ್ ನಲ್ಲಿ ಮಾತನಾಡುತ್ತಾ ನಿಂತಿದ್ದಾರೆ. ನನಗೆ ತೊಂದರೆ ಮಾಡಲೆಂದೇ ಈ ಷಡ್ಯಂತ್ರ ಮಾಡಿದ್ದಾರೆ ಎಂದು ಸಿಟಿ ರವಿ ಆರೋಪ ಮಾಡಿದ್ದಾರೆ.