CT Ravi: ಭಯೋತ್ಪಾದಕರು ಹುಟ್ಟುತ್ತಿರುವುದು ಮದರಸಾಗಳಿಂದಲಾ, ಗುರುಕುಲದಿಂದಲಾ: ಸಿಟಿ ರವಿ

Krishnaveni K

ಶನಿವಾರ, 31 ಮೇ 2025 (13:26 IST)
ಬೆಂಗಳೂರು: ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಹತ್ಯೆ ಬಳಿಕ ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಎಂಎಲ್ ಸಿ ಸಿಟಿ ರವಿ ಭಯೋತ್ಪಾದಕರು ಹುಟ್ಟುತ್ತಿರುವುದು ಮದರಸಾಗಳಿಂದಲಾ, ಗುರುಕುಲದಿಂದಲಾ ಎಂದು ಪ್ರಶ್ನೆ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ‘ಸುಹಾಸ್ ಶೆಟ್ಟಿ ಹತ್ಯೆಯಾದಾಗ ಅವನು ಗೂಂಡಾ ಎಂದರು. ಪರಮೇಶ್ ಹತ್ಯೆಯಾದಾಗ ತೇಲಿಸಿಬಿಟ್ಟರು. ಇನ್ನೊಂದು ಕೋಮಿನ ವ್ಯಕ್ತಿ ಹತ್ಯೆಯಾದಾಗ ಕಣ್ಣೀರು ಸುರಿಸುವ ಮನೋಭಾವ ಕಾಂಗ್ರೆಸ್ ಸರ್ಕಾರ ತೋರಿಸ್ತಿರೋದು ನಿಶ್ಚಳವಾಗಿ ಓಲೈಕೆ.

ಈಗ ಈ ನೆಪದಲ್ಲಿ ಹಿಂದೂ ಸಂಘಟನೆಗಳನ್ನು ಗುರಿ ಮಾಡಿಕೊಂಡು ತೊಂದರೆ ನೀಡಲಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ನಿಜವಾಗಿ ನಿಮಗೆ ಶಾಂತಿ ನೆಲೆಸಬೇಕು ಎಂಬ ಉದ್ದೇಶವಿದೆಯಾ?

ಅಸಷ್ಣುಹಿತೆ ಯಾವ ತತ್ವದಿಂದ ಹುಟ್ಟಿಕೊಳ್ಳುತ್ತಿದೆ? ಇದರ ಬಗ್ಗೆ ಒಂದು ವಿಮರ್ಶೆ ನಡೆಯಲಿದೆ. ಮತ ಗ್ರಂಥಗಳ ವಿಮರ್ಶೆ ನಡೆಯಲಿದೆ. ಆಗ ಗುರುಕುಲದಿಂದ ಭಯೋತ್ಪಾದಕರು ಹುಟ್ಟುತ್ತಾರೋ, ಮದರಸಾಗಳಿಂದ ಹುಟ್ಟುತ್ತಿದ್ದಾರೋ ಗೊತ್ತಾಗುತ್ತದೆ’ ಎಂದಿದ್ದಾರೆ.

‘ಯಾರಿಗೆ ಯಾವ ತತ್ವದ ಮೇಲೆ ನಂಬಿಕೆಯಿದೆ, ನಾನು ಸನಾತನ ಧರ್ಮದ ಮೇಲೆ ನಂಬಿಕೆಯಿಟ್ಟಿವನು. ನನ್ನ ಧರ್ಮದಲ್ಲಿ ಸ್ವರ್ಗಕ್ಕೆ ಹೋದರೆ ಪುಣ್ಯದ ಕೆಲಸ ಮಾಡಬೇಕು. ಎನ್ನುತ್ತದೆ. ಕೆಲವು ಧರ್ಮವು ಇನ್ನೊಬ್ಬರನ್ನು ಕೊಂದರೆ ಸ್ವರ್ಗಕ್ಕೆ ಹೋಗುತ್ತದೆ ಎನ್ನುತ್ತದೆ. ಇಂತಹವುಗಳ ಬಗ್ಗೆ ಸಂವಾದ ನಡೆಸಬೇಕಾದ ಅವಶ್ಯಕತೆಯಿದೆ. ಅಂತಹ ಮತಗ್ರಂಥಗಳನ್ನು ದೂರ ಇಡಬೇಕು. ಇಲ್ಲದೇ ಇದ್ದರೆ ಕೋಮುಗಲಭೆ ಹೇಗೆ ನಿಯಂತ್ರಣಕ್ಕೆ ಬರುತ್ತದೆ’ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ