Bantwal Murder: ಮುಸ್ಲಿಮರ ಆಕ್ರೋಶಕ್ಕೆ ಬೆಚ್ಚಿದ ಸರ್ಕಾರ, ರಾಜ್ಯಕ್ಕೆ ಹೊಸ ಹೋಂ ಮಿನಿಸ್ಟರ್ ಬರ್ತಾರಾ

Krishnaveni K

ಶುಕ್ರವಾರ, 30 ಮೇ 2025 (09:49 IST)
ಮಂಗಳೂರು: ಬಂಟ್ವಾಳದಲ್ಲಿ ನಡೆದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ ರಾಜ್ಯ ಸರ್ಕಾರದ ವಿರುದ್ಧ ಮುಸ್ಲಿಂ ಸಮುದಾಯ ಆಕ್ರೋಶಗೊಳ್ಳುವಂತೆ ಮಾಡಿದೆ. ಮುಸ್ಲಿಮರ ಆಕ್ರೋಶಕ್ಕೆ ಮಣಿದು ಈಗ ರಾಜ್ಯ ಸರ್ಕಾರ ಗೃಹಸಚಿವರನ್ನೇ ಬದಲು ಮಾಡುತ್ತಾ? ಹೀಗೊಂದು ಅನುಮಾನ ಮೂಡಿದೆ.

ರಾಜ್ಯದ ಗೃಹಮಂತ್ರಿಯಾಗಿರುವ ಡಾ ಜಿ ಪರಮೇಶ್ವರ್ ಬಗ್ಗೆ ಹಲವಾರು ಬಾರಿ ಟೀಕೆಗಳು ಕೇಳಿಬಂದಿದ್ದವು. ಅವರು ಅನುಭವಿ ರಾಜಕಾರಣಿಯೇ. ಆದರೆ ಅವರ ಮಾತು ಕೂಡಾ ಖಡಕ್ ಆಗಿಲ್ಲ. ಕೇವಲ ಕಠಿಣ ಕ್ರಮದ ಭರವಸೆ ಮಾತ್ರ. ಆದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಇನ್ನೊಂದೆಡೆ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ಅವರೂ ಒಬ್ಬರು. ಹೀಗಾಗಿ ಅವರನ್ನು ಹಣಿಯಲು ಕೆಲವರು ಪ್ರಯತ್ನ ಮಾಡುತ್ತಿರಬಹುದು. ಈ ನಡುವೆ ರನ್ಯಾ ರಾವ್ ಪ್ರಕರಣದಿಂದ ಪರಮೇಶ್ವರ್ ಮುಜುಗರಕ್ಕೊಳಗಾಗಿದ್ದರು. ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರೇ ರನ್ಯಾಗೆ ಪರಮೇಶ್ವರ್ 15-20 ಲಕ್ಷ ಗಿಫ್ಟ್ ಕೊಟ್ಟಿದ್ದರು ಎಂದು ಹೇಳಿದ್ದು ಅವರ ವರ್ಚಸ್ಸಿಗೆ ಧಕ್ಕೆ ತಂದಿತ್ತು. ಇದರ ನಡುವೆ ಈಗ ದಕ್ಷಿಣ ಕನ್ನಡದಲ್ಲಿ ಸರಣಿ ಹತ್ಯೆಯಾಗುತ್ತಿರುವುದು ಮತ್ತು ಅದನ್ನು ತಡೆಯಲು ವಿಫಲವಾಗಿರುವುದಕ್ಕೆ ಪರಮೇಶ್ವರ್ ಅವರನ್ನೇ ಹೊಣೆ ಮಾಡುವ ಸಾಧ್ಯತೆಯಿದೆ.

ನಿನ್ನೆ ಸಿಎಂ ಸಿದ್ದರಾಮಯ್ಯ ದಿಡೀರ್ ಆಗಿ ಬಿಕೆ ಹರಿಪ್ರಸಾದ್ ಅವರನ್ನು ಭೇಟಿ ಮಾಡಿದ ನಂತರ ಗೃಹಸಚಿವರ ಬದಲಾವಣೆ ಮಾತು ಜೋರಾಗಿದೆ. ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದಿರುವ ಮುಸ್ಲಿಮ್ ಸಮುದಾಯವನ್ನು ಸಮಾಧಾನಪಡಿಸಲು ಸದ್ಯದಲ್ಲೇ ರಾಜ್ಯದಲ್ಲಿ ಗೃಹ ಖಾತೆ ಬದಲಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ