ನಮಗೆ ಗೆಲ್ಲುವ ಅರ್ಹತೆಯಿಲ್ವಾ?- ಪಕ್ಷದ ನಾಯಕರನ್ನು ಪ್ರಶ್ನಿಸಿದ ಶರತ್ ಬಚ್ಚೇಗೌಡ

ಮಂಗಳವಾರ, 5 ನವೆಂಬರ್ 2019 (11:11 IST)
ಹೊಸಕೋಟೆ : ಬಿಜೆಪಿ ಮುಖಂಡ, ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಪಕ್ಷದ ನಾಯಕರ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ.



ಹೊಸಕೋಟೆಯಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿರುವವರಿಗೆ ಇಬ್ಬರು ತಾಯಂದಿರು ಇರ್ತಾರೆ. ಹೆತ್ತ ತಾಯಿ ಹಾಗೂ ಪಕ್ಷ ಎಂಬ ಇಬ್ಬರು ತಾಯಂದಿರು ಇರುತ್ತಾರೆ.. ಆದರೆ ಯಾರೋ ಒಬ್ಬ ಕುತಂತ್ರಿ ಪಿತೂರಿಯಿಂದ ನಮ್ಮ ಪಕ್ಷಕ್ಕೆ ಬಂದು ನಮ್ಮನ್ನ ಬೆಳೆಸಿದ ತಾಯಿಯನ್ನು ನಮ್ಮಿಂದ ದೂರ ಮಾಡ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

ನಮಗೆ ಗೆಲ್ಲುವ ಅರ್ಹತೆಯಿಲ್ವಾ? ನಮ್ಮ ಶ್ರಮಕ್ಕೆ ಜಯ ಬೇಡ್ವಾ,? ಪಕ್ಷದ ಹಿರಿಯರು ನಮಗೆ ಆಶೀರ್ವಾದ ಮಾಡುವುದಿಲ್ಲವಾ? ನಾವು ಅದಕ್ಕೆ ಅರ್ಹರಲ್ವಾ ?ಎಂದು ಅವರು ಪಕ್ಷದ ನಾಯಕರನ್ನು ಪ್ರಶ್ನಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ