ಪತ್ನಿಯ ಮಡಿವಂತಿಕೆ ಸಹಿಸಲಾರದ ಪತಿ ಮಾಡಿದ್ದೇನು ಗೊತ್ತಾ?

ಗುರುವಾರ, 20 ಫೆಬ್ರವರಿ 2020 (06:49 IST)
ಮೈಸೂರು : ಹೆಂಡತಿಯ ಮಡಿವಂತಿಕೆಯಿಂದ ಬೇಸತ್ತ ಪತಿಯೊಬ್ಬ ಆಕೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ  ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನ ಮಡಹಳ್ಳಿಯಲ್ಲಿ ನಡೆದಿದೆ.


ಪುಟ್ಟಮಣಿ ಮೃತಪಟ್ಟ ಪತ್ನಿ, ಶಾಂತಮೂರ್ತಿ ಕೊಲೆ ಮಾಡಿದ ಪತಿ. ಈ ದಂಪತಿಗೆ ಇಬ್ಬರು  ಹೆಣ್ಣುಮಕ್ಕಳಿದ್ದಾರೆ. ಪುಟ್ಟಮಣಿ ಯಾವಾಗಲೂ ಮಡಿವಂತಿಕೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದು, ಆದಕಾರಣ ತನ್ನ ಪತಿ ಹಾಗೂ ಮಕ್ಕಳಿಗೆ ನಿತ್ಯವೂ ಹತ್ತಾರು ಬಾರಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದಾಳಂತೆ. ಇದರಿಂದ ಬೇಸತ್ತ ಪತಿ ಆಕೆಯ ಕಿರುಕುಳ ತಾಳಲಾರದೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಈ ಘಟನೆಗೆ ಸಂಬಂಧಿಸಿದಂತೆ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ