ಚುನಾವಣೆಗಾಗಿಯೇ ಬರೋರು ಬೇಕೋ – ಜನರ ಮಧ್ಯೆ ಇರೋರು ಬೇಕೋ ಎಂದ ಸಂಸದ

ಸೋಮವಾರ, 11 ಮಾರ್ಚ್ 2019 (15:04 IST)
ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದು, ಸೂರ್ಯಚಂದ್ರ ಇರುವಷ್ಟೇ ಸತ್ಯ ಎಂದು ಬಿಜೆಪಿ ಸಂಸದ ಹೇಳಿದ್ದಾರೆ.

ಶಿವಮೊಗ್ಗ ಕ್ಷೇತ್ರದ ಬಿಜೆಪಿಯ ಸಂಭವನೀಯ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮಾತನಾಡಿದ್ದು, ಕಳೆದ ಬಾರಿ 282 ಸೀಟುಗಳು ಗೆದ್ದಿದ್ದೇವು.  ಆದರೆ ಈ ಬಾರಿ 380 ರಿಂದ 400 ಸೀಟುಗಳು ಖಚಿತ ಗೆಲುವಾಗಲಿದೆ ಎಂದರು. ಇನ್ನು ಈ ಚುನಾವಣೆಗೂ ಕೂಡ ವಿರೋಧ ಪಕ್ಷದವರು ತಯಾರಾಗಿಲ್ಲ ಎಂದು ಲೇವಡಿ ಮಾಡಿದ್ದಾರೆ.  ವಿರೋಧ ಪಕ್ಷದವರು, ಅಭ್ಯರ್ಥಿಗಳ ಪಟ್ಟಿ ಮಾಡುವುದರೊಳಗೆ ಚುನಾವಣೆ ಮುಗಿದು ಹೋಗಲಿದೆ. 

ಅವರು ಈಗ ಪಟ್ಟಿ ಹಿಡಿದು ಕೂತಿದ್ದಾರೆ.  ಆದರೆ ಬಿಜೆಪಿ ವರಿಷ್ಠರು,  ಕಾರ್ಯಕರ್ತರು, ಚುನಾವಣೆಗಾಗಿ ಸಿದ್ಧತೆಗಳನ್ನು ಪೂರ್ಣ ಮುಗಿಸಿದ್ದಾರೆ ಎಂದು ರಾಘವೇಂದ್ರ ಟಾಂಗ್ ನೀಡಿದ್ದಾರೆ.  ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತು ರಾಷ್ಟ್ರದಲ್ಲಿ ಮೋದಿ ನೇತೃತ್ವದಲ್ಲಿ, ಅತೀ ಹೆಚ್ಚು ಸೀಟುಗಳ ಗೆಲುವು ಖಚಿತವಾಗಿದ್ದು, ಶೀಘ್ರದಲ್ಲೇ ಪಕ್ಷದ ವರಿಷ್ಠರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ರಾಘವೇಂದ್ರ ಹೇಳಿದ್ದಾರೆ.

ಇನ್ನು ಇದೇವೇಳೆ ಅವರು, ವಿರೋಧಿಗಳಲ್ಲಿ ಚುನಾವಣೆಗಾಗಿಯೇ ಎಂದೇ ಬರುವವರು ಇದ್ದಾರೆ ಎಂದು ಮಧು ಬಂಗಾರಪ್ಪರ ಹೆಸರನ್ನ ಹೇಳದೇ ಲೇವಡಿ ಮಾಡಿದ್ದಾರೆ.  ಆಮದಾದ ಮತ್ತು ಚುನಾವಣಾ ಸಂದರ್ಭದಲ್ಲಿ ಮಾತ್ರ ಕ್ಷೇತ್ರಕ್ಕೆ ಬಂದು ಹೋಗುವ ಅಭ್ಯರ್ಥಿ ಬೇಕೋ.  ಜನರ ಮಧ್ಯೇ ಇರುವ ವ್ಯಕ್ತಿ ಬೇಕೋ ಎಂಬುದು ಜನರೇ ತೀರ್ಮಾನಿಸಲಿದ್ದು, ಮುಂಬರುವ ಚುನಾವಣೆಯಲ್ಲಿ ತಮ್ಮ ಗೆಲುವು ನಿಶ್ಚಿತ ಎಂಬ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ