ಹಾಸನದಲ್ಲಿ ಆನೆ ಹಿಂಡಿನ ಚಿನ್ನಾಟ

ಗುರುವಾರ, 30 ನವೆಂಬರ್ 2023 (18:00 IST)
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿಯ ಕಾಫಿ ತೋಟದಲ್ಲಿ ಗಜಪಡೆಯ ವಿಹಾರದ ವೀಡಿಯೋ ವೈರಲ್ ಆಗಿದೆ. ಕಾಫಿ ತೋಟದ ಅಂಚಲ್ಲಿ ನಿಂತು ಆನೆ ಹಿಂಡು ಚಿನ್ನಾಟವಾಡುತ್ತಿವೆ. 20ಕ್ಕೂ ಹೆಚ್ಚು ಆನೆಗಳು ಆಹಾರ ಸೇವಿಸಿ ನೀರು ಕುಡಿದು ಅಲ್ಲೇ ಬೀಡುಬಿಟ್ಟಿವೆ. ಬೇಲೂರು ತಾಲ್ಲೂಕಿನ ಭಾಗದಿಂದ ಮತ್ತೆ ಸಕಲೇಶಪುರ ತಾಲ್ಲೂಕಿನ ಭಾಗಕ್ಕೆ ಗಜಪಡೆ ಶಿಫ್ಟ್ ಆಗಿದ್ದು, ಆನೆ ಹಿಂಡು ಕಂಡು ಜನರು ಭಯಭೀತರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ