ಪ್ರತಿ ಮನೆಯಲ್ಲೂ ದೇವರ ಫೋಟೋ ಜೊತೆ ಸಿದ್ದರಾಮಯ್ಯ ಫೋಟೋ ಇದೆ : ಜಮೀರ್

ಮಂಗಳವಾರ, 14 ಮಾರ್ಚ್ 2023 (11:18 IST)
ದಾವಣಗೆರೆ : ನಮ್ಮ ಕ್ಷೇತ್ರದ ಸ್ಲಮ್ಗಳಲ್ಲಿ ಜನರು ಪ್ರತಿಯೊಬ್ಬರ ಮನೆಯಲ್ಲೂ ದೇವರ ಫೋಟೋ ಜೊತೆಗೆ ಸಿದ್ದರಾಮಯ್ಯ ಅವರ ಫೋಟೋ ಸಹ ಇಟ್ಟಿದ್ದರು ಎಂದು ಶಾಸಕ ಜಮೀರ್ ಅಹ್ಮದ್ಖಾನ್ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಸ್ಲಮ್ಗಳಲ್ಲಿ ಜನರು ಪ್ರತಿ ಮನೆಯಲ್ಲಿ ದೇವರ ಫೋಟೋ ಜೊತೆಗೆ ಸಿದ್ದರಾಮಯ್ಯ ಫೋಟೋ ಇಟ್ಟಿದ್ದರು.

ಯಾಕೆ ಎಂದು ಕೇಳಿದಾಗ ಕೋವಿಡ್ ಸಂದರ್ಭದಲ್ಲಿ ಅವರು ಕೊಟ್ಟ ಅಕ್ಕಿ ಇರಲಿಲ್ಲ ಅಂದಿದ್ರೆ, ಉಪವಾಸ ಸಾಯಬೇಕಿತ್ತು ಅಂತಾ ಹೇಳಿದ್ರು. ಆದರೆ ಬಿಜೆಪಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನೇ ಕಡಿತಗೊಳಿಸಿದರು ಎಂದು ಅಸಮಾಧಾನ ಹೊರಹಾಕಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ