ರಾಹುಲ್‌ ಗಾಂಧಿಯ ಕೆನ್ನೆಗೆ ಭಾರಿಸಿದರೆ ಎಲ್ಲವೂ ಸರಿಯಾಗುತ್ತದೆ: ಭರತ್ ಶೆಟ್ಟಿ ಆಕ್ರೋಶ

Sampriya

ಸೋಮವಾರ, 8 ಜುಲೈ 2024 (16:05 IST)
Photo Courtesy X
ಮಂಗಳೂರು: ರಾಹುಲ್‌ ಗಾಂಧಿ ಅವರ ಕೆನ್ನೆಗೆ ಎರಡು ಬಾರಿಸಿದರೆ ಎಲ್ಲವೂ ಸರಿಹೋಗುತ್ತದೆ ಎಂದು ಶಾಸಕ ಭರತ್ ಶೆಟ್ಟಿ ಅವರು ಕಿಡಿಕಾರಿದ್ದಾರೆ.

ಸಂಸತ್ತಿನಲ್ಲಿ ರಾಹುಲ್ ಗಾಂಧಿ ಹಿಂದೂ ವಿರೋಧಿ ಹೇಳಿಕೆ ನೀಡಿದ್ದರೆಂದು ಆರೋಪಿಸಿ ಇಂದು ಮಂಗಳೂರಿನಲ್ಲಿ ಬಿಜೆಪಿ ಯುವಮೋರ್ಚಾ ಘಟಕ ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸಿತು.

ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಭರತ್ ಶೆಟ್ಟಿ ಅವರು,  ಹಿಂದೂ ವಿರೋಧಿ ಹೇಳಿಕೆ ನೀಡಿದ ರಾಹುಲ್‌ ಗಾಂಧಿಗೆ ಪಾರ್ಲಿಮೆಂಟ್‌ನ ಒಳಗೆ ಕೆನ್ನೆಗೆ ಎಸರು ಬಾರಿಸಬೇಕಿತ್ತು. ಆಗ ಎಲ್ಲವೂ ಸರಿಹೋಗುತ್ತೆ. ಈ ರೀತಿ ಮಾಡಿದ್ದರೆ ಏಳೆಂಟು ಎಫ್‌ಐಆರ್‌ ದಾಖಲಾಗುತ್ತಿತ್ತು. ಅಷ್ಟೇ ತಾನೇ ಎಂದರು.

ಇನ್ನು ಪ್ರತಿಭಟನೆ ವೇಳೆ ಕಾಣಿಸಿಕೊಂಡ ನಾಯಿಯನ್ನು  ತೋರಿಸಿ ರಾಹುಲ್‌ಗಾಂಧಿಯನ್ನು ಲೇವಾಡಿ ಮಾಡಿದರು.  

ಶಿವನ ಫೋಟೋವನ್ನು ಹಿಡಿದುಕೊಂಡಿರುವ ರಾಹುಲ್‌ ಗಾಂಧಿಗೆ ಶಿವ ಮೂರನೇ ಕಣ್ಣು ಬಿಟ್ಟರೆ ಬೂದಿಯಾಗುತ್ತಾನೆ ಎಂಬ ವಿಷಯ ಗೊತ್ತಿಲ್ಲ. ರಾಹುಲ್ ಗಾಂಧಿ ಒಬ್ಬ ದೊಡ್ಡ ಹುಚ್ಚ. ಹಿಂದೂಗಳ ಬಗ್ಗೆ ಏನು ಬೇಕಾದ್ರು ಮಾತನಾಡಿದ್ರೆ ಕೇಳ್ತಾರೆಂಬ ಭಾವನೆ ರಾಹುಲ್‌ಗೆ ಇದೆ. ಅಲ್ಲಿ ಅವರು ಬೊಗಳಿದರೆ ಇಲ್ಲಿನ ನಾಯಕರು ಬಾಲ ಬಿಚ್ಚಲು ಶುರು ಮಾಡ್ತಾರೆ ಎಂದು ಕೆಂಡಾಮಂಡಲವಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ