ರೈತರ ಧ್ವನಿಗೆ ನಾವು ಧ್ವನಿಯಾಗೋಣ : ಸಾ.ರಾ ಗೋವಿಂದ್

ಭಾನುವಾರ, 26 ಸೆಪ್ಟಂಬರ್ 2021 (22:00 IST)
ಅಖಿಲ ಕರ್ನಾಟಕ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷರಾದ ಸಾ.ರಾ ಗೋವಿಂದು ರವರ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ 7.30 ಕ್ಕೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕೇಂದ್ರ ಸರ್ಕಾರದ ರೈತ ವಿರೋಧಿ ನಿಲುವುಗಳು ರೈತನಿಗೆ ಮಾರಕವಾಗಿದ್ದು ರೈತರು ಸಾಯುವಂತಹ ಪರಿಸ್ಥಿತಿಯಲ್ಲಿದ್ದಾರೆ. ಹಾಗಾಗಿ ರೈತರು ಕರೆ ನೀಡಿರುವ ಭಾರತ್ ಬಂದ್ ಗೆ ಬೆಂಬಲಿಸಿ ಬಸ್ಸುಗಳನ್ನು ತಡೆಯುವ ಮುಖಾಂತರ ಯಶಸ್ಸಿಗೆ ನಾವೆಲ್ಲರೂ ಕೈ ಜೋಡಿಸೋಣ, ಸ್ವಾಭಿಮಾನಿ ರೈತರ ಧ್ವನಿಗೆ ನಾವು ಧ್ವನಿಯಾಗೋಣ ಎಂದು ಸಾ.ರಾ ಗೋವಿಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ