ಸಚಿವ ಬಿ.ಸಿ.ಪಾಟೀಲ್ ರನ್ನು ತರಾಟೆಗೆ ತೆಗೆದುಕೊಂಡ ರೈತರು

ಶನಿವಾರ, 23 ಜನವರಿ 2021 (10:41 IST)
ಬೆಂಗಳೂರು : ಕೃಷಿ ಕಾಯ್ದೆ ವಾಪಾಸ್ ಪಡೆಯುವಂತೆ ಆಗ್ರಹಿಸಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ರೈತರೆಲ್ಲಾ ಸೇರಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಗುಂಡ್ಲುಪೇಟೆಯ ಹೆದ್ದಾರಿಯಲ್ಲಿ ರೈತರೆಲ್ಲಾ ಸೇರಿ ಕೃಷಿ ಕಾಯ್ದೆಯ ವಿರೋಧ  ಧರಣಿ ನಡೆಸುತ್ತಿದ್ದರು. ಆ ವೇಳೆ ಸಚಿವ ಬಿ.ಸಿ.ಪಾಟೀಲ್  ಸ್ಥಳಕ್ಕೆ ಭೇಟಿ ನೀಡಿದ್ದರು. ಆಗ  ರೈತರು ಕೃಷಿ ಕಾಯ್ದೆ ವಾಪಾಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. ಕೆಲಕಾಲ ರೈತರು ಸಚಿವರ ನಡುವೆ ವಾಗ್ದಾಳಿ ನಡೆದಿದ್ದು,  ರೈತರ ಪ್ರಶ್ನೆಗೆ ಉತ್ತರಿಸಲಾಗದೆ ಸಚಿವರು ಅಲ್ಲಿಂದ ಹೊರಟಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ