ಶಾಲೆಗೆ ಬೆಂಕಿ ಇಟ್ಟು, ಪ್ರೇಮ ಪತ್ರ ಬರೆದಿದ್ದ ಕಿರಾತಕ ಅರೆಸ್ಟ್

ಸೋಮವಾರ, 9 ಜುಲೈ 2018 (17:38 IST)
ಶಾಲೆಗೆ ಬೆಂಕಿ ಇಟ್ಟು, ನಂತರ ಪ್ರೇಮಪತ್ರವನ್ನು ಶಾಲೆಯಲ್ಲಿ ಎಸೆದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಕಿರಾತಕ ಕೊನೆಗೂ ಅರೆಸ್ಟ್ ಆಗಿದ್ದಾನೆ. ಉಮೇಶ್ ಆಚಕನಳ್ಳಿ ಬಂಧಿಸಿದ ಅಥಣಿ ಪೋಲಿಸರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಜೂನ್ 3 ರಂದು ನಡೆದಿದ್ದ ಘಟನೆ ಇದಾಗಿತ್ತು.
ಒನ್ ಸೈಡ್ ಪ್ರೀತಿ ಮಾಡಿ ಶಾಲೆಗೆ ಬೆಂಕಿ ಇಟ್ಟು ದ್ವಂಸಗೊಳಿಸುವದಾಗಿ ಹೇಳಿದ್ದ ಉಮೇಶ್ ಆಚಕನಹಳ್ಳಿ 19
ಬಂಧನ ಮಾಡಲಾಗಿದೆ.

ಮತ್ತೆ ಐದು ಪುಟದಷ್ಟು    ಪ್ರೇಮ ಪತ್ರ ಬರೆದು ಪೊಲೀಸರಿಗೆ ಸವಾಲ್ ಹಾಕಿದ್ದ ಉಮೇಶ ಆಚಕನಳ್ಳಿ.
ಪತ್ರದಿಂದ ಮತ್ತೆ ಆತಂಕ ಉಂಟು ಮಾಡಿದ್ದನು. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ